ತುಮಕೂರು: ಹೊಸದಾಗಿ 78 ಪ್ರಕರಣ ಪತ್ತೆ…!

ತುಮಕೂರು

     ಜಿಲ್ಲೆಯಲ್ಲಿ ಕೊರೊನಾ ಆರ್ಭಟಿಸುತ್ತಿದೆ. ದಿನೇದಿನೆ ಸೋಂಕಿತರ ಹಾಗೂ ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸೋಮವಾರ ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ 26ಕ್ಕೆ ಏರಿದೆ. ಸೋಮವಾರ ಹೊಸದಾಗಿ 78 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 777ಕ್ಕೆ ಏರಿಕೆಯಾಗಿದೆ.

     ತುಮಕೂರು ನಗರದ ಕೆ.ಹೆಚ್.ಬಿ ಕಾಲೋನಿಯ 59 ವರ್ಷದ ಮಹಿಳೆ ಕೋವಿಡ್‍ಗೆ ಬಲಿಯಾಗಿದ್ದಾರೆ. ಇವರು ಜ್ವರ, ಕೆಮ್ಮು, ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಇವರ ಗಂಟಲು ದ್ರವ ಪರೀಕ್ಷಿಸಿದಾಗ ಪಾಸಿಟೀವ್ ವರದಿ ಬಂದಿತ್ತು, ಇವರು ಇದೇ 19ರಂದು ಮೃತಪಟ್ಟರು.

      ಕುಣಿಗಲ್ ಪಟ್ಟಣದ 40 ವರ್ಷದ ಪುರುಷ ಸೋಂಕಿನಿಂದ ಮೃತಪಟಿದ್ದಾರೆ. ಇವರು ಜ್ವರ, ಕೆಮ್ಮು ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಗಂಟಲು ದ್ರವ ತೆಗೆದು ಪರೀಕ್ಷೆ ಮಾಡಲಾಗಿದ್ದು, ಸೋಂಕು ಖಚಿತವಾಗಿತ್ತು. ಇವರು ಈ ತಿಂಗಳ 20ರಂದು ಅಸುನೀಗಿದರು.

      ಶಿರಾ ನಗರದ ಜಾಮಿಯಾ ನಗರದ 60 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಇವರು ಜ್ವರ, ಉಸಿರಾಟದ ತೊಂದರೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು, ಇವರು ಈ ತಿಂಗಳ 20ರಂದು ಸಾವಿಗೀಡಾದರು ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

      ಸೋಮವಾರ ವರದಿಯಾದ 78 ಸೋಂಕು ಪ್ರಕರಣಗಳಲ್ಲಿ ಕುಣಿಗಲ್ ತಾಲ್ಲೂಕಿನಲ್ಲಿ 24, ತುಮಕೂರು ತಾಲ್ಲೂಕಿನಲ್ಲಿ 17, ಪಾವಗಡ ಹಾಗೂ ಮಧುಗಿರಿ ತಾಲ್ಲೂಕಿನಲ್ಲಿ ತಲಾ 10, ಕೊರಟಗೆರೆ ತಾಲ್ಲೂಕಿನಲ್ಲಿ 8, ಶಿರಾ ತಾಲ್ಲೂಕಿನಲ್ಲಿ 6, ತಿಪಟೂರು ತಾಲ್ಲೂಕು 2 ಹಾಗೂ ತುರುವೇಕೆರೆ ತಾಲ್ಲೂಕಿನಲ್ಲಿ ಒಂದು ಸೋಂಕು ಪ್ರಕರಣ ದೃಢಪಟ್ಟಿದೆ. ಇವರಲ್ಲಿ ಇಬ್ಬರು ಬಾಣಂತಿಯರು, ಒಬ್ಬರು ಗರ್ಭಿಣಿ, ನಾಲ್ವರು ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವಯಸ್ಸಿನ 9 ಜನ ಇದ್ದಾರೆ. ಗುಣಮುಖರಾಗಿ ಸೋಮವಾರ 53 ಜನ ಆಸ್ಪತ್ರೆಯಿಂದ ಬಿಡುಗಡೆಯಾದರು, ಈವರೆಗೆ ಒಟ್ಟು 411 ಜನ ಬಿಡುಗಡೆಯಾಗಿದ್ದಾರೆ. 341 ಜನರಲ್ಲಿ ಸೋಂಕು ಸಕ್ರಿಯವಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

     ಈವರೆಗೆ ಜಿಲ್ಲೆಯಲ್ಲಿ ವರದಿಯಾದ ಒಟ್ಟು 777 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಪ್ರಕರಣಗಳಿವೆ, ಇದೂವರೆಗೆ ತುಮಕೂರು ತಾ. 333, ಪಾವಗಡ ತಾ. 74, ಮಧುಗಿರಿ ತಾ. 66, ಶಿರಾ 63, ಕುಣಿಗಲ್ ತಾ. 63, ಕೊರಟಗೆರೆ ತಾ. 46, ಚಿಕ್ಕನಾಯಕನಹಳ್ಳಿ ತಾ. 46, ಗುಬ್ಬಿ ತಾ. 34, ತಿಪಟೂರು ತಾ. 27, ತುರುವೇಕೆರೆ ತಾ. 25 ಪ್ರಕರಣ ವರದಿಯಾಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap