ಚಳ್ಳಕೆರೆ
ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕಾಟಪ್ಪನಹಟ್ಟಿ ಗ್ರಾಮದಲ್ಲಿ ಬುಧವಾರ ಸಂಭವಿಸಿದ ಆಕಸ್ಮಿಕ ಬೆಂಕಿ ಅನಾಹುತದಲ್ಲಿ 15ಕ್ಕೂ ಹೆಚ್ಚು ಹುಲ್ಲಿನ ಬಣವೆಗಳು 8 ಕುರಿಗಳು ಬೆಂಕಿಯಲ್ಲಿ ಸುಟ್ಟುಹೋಗಿ ಸುಮಾರು 2 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.
ಗ್ರಾಮದ ಚಿನ್ನಯ್ಯ, ನಾಗರಾಜ, ಕಾಟಪ್ಪ, ಚನ್ನಯ್ಯ, ಕೆಂಚಪ್ಪ ಎಂಬುವವರಿಗೆ ಸೇರಿದ ಕುರಿಗಳು ಮತ್ತು ಹುಲ್ಲಿನ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸುದ್ದಿ ತಿಳಿದ ಕೂಡಲೇ ಚಳ್ಳಕೆರೆ ಅಗ್ನಿ ಶಾಮಕ ಪಡೆ ಸ್ಥಳಕ್ಕೆ ದಾವಿಸಿ ಬೆಂಕಿಯನ್ನು ನಂದಿಸಿದೆ.
ಈ ಬಗ್ಗೆ ಮಾತನಾಡಿದ ನಾಗರಾಜ, ನಮ್ಮಲ್ಲಿ ಹಲವಾರು ಜಾನುವಾರುಗಳಿದ್ದು, ಪ್ರತಿನಿತ್ಯ ಅವುಗಳಿಗೆ ಮೇವು ಪೂರೈಸಲು ಕಷ್ಟಕರವಾಗಿದ್ದು, ಗೋಶಾಲೆ ಇಲ್ಲದ ಕಾರಣ ಬೇರೆ ಕಡೆಯಿಂದ ಮೇವು ತಂದು ಬಣವೆ ಹಾಕಿದ್ದೆವು. ಕಡ್ಲೆ, ರಾಗಿ, ಭತ್ತದ ಹುಲ್ಲಿನ ಬಣವೆ ಮಾಡಿದ್ದು, ಎಲ್ಲವನ್ನು ಒಂದರ ಒಂದರ ಪಕ್ಕದಲ್ಲಿ ಶೇಖರಿಸಲಾಗಿತ್ತು. ಆಕಸ್ಮಿಕ ಬೆಂಕಿಗೆ ಎಲ್ಲವೂ ಸುಟ್ಟಿದ್ದು, ಜಾನುವಾರುಗಳಿಗೂ ಸಹ ಮೇವಿನ ಸಂಕಷ್ಟ ಉಂಟಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
