ಕುಣಿಗಲ್
ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಪುರಸಭಾ ಅಧ್ಯಕ್ಷ ಕೆ.ಎಲ್.ಹರೀಶ್ ಬಿರುಸಿನ ಪ್ರಚಾರವನ್ನ ಕೈಗೊಂಡು ಅಭ್ಯರ್ಥಿ ಗೆಲುವಿಗಾಗಿ ಮನೆ-ಮನೆಯಲ್ಲಿ ಮತಯಾಚಿಸಿದರು.
ಕುಣಿಗಲ್ ಪುರಸಭೆಯ 22ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ಎಂ.ಜಿ.ಗೋವಿಂದರಾಜ್ ಪರವಾಗಿ ಬ್ಯಾಂಕ್ ಕಾಲೋನಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚಿಸಿದರು.ಈ ಹಿಂದೆ ತಾವು ಪುರಸಭಾ ಅಧ್ಯಕ್ಷರಾಗಿದ್ದಾಗ ಈ ವಾರ್ಡಿನ ಸಮಗ್ರ ಅಭಿವೃದ್ಧಿಯಾದ ರಸ್ತೆ,ಕುಡಿಯುವ ನೀರು,ಚರಂಡಿ ಸೇರಿದಂತೆ ಪರಿಸರ ರಕ್ಷಿಸಲು ಗಿಡಮರಗಳನ್ನ ಸಹ ಹಾಕಿಸುವತ್ತ ಕೆಲಸ ಕಾರ್ಯಗಳನ್ನ ಕೈಗೊಂಡು ಕಳೆದ 30 ವರ್ಷಗಳಿಂದಲೂ ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿ ಈ ವಾರ್ಡಿನ ಎಲ್ಲಾ ವರ್ಗದ ಜನರ ಒಡನಾಡಿಯಾಗಿರುವ ಎಂ.ಜಿ.ಗೋವಿಂದರಾಜು ಸರಳ-ಸಜ್ಜನಿಕೆ ವ್ಯಕ್ತಿಯಾಗಿದ್ದು,
ಈಗ ಈ ವಾರ್ಡಿನ ಜೆಡಿಎಸ್ ಅಭ್ಯರ್ಥಿಯಾಗಿದ್ದು,ಈ ಭಾಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವಂತಹ ಯುವ ಉತ್ಸಾಹಿಯಾಗಿ ಇರುವುದು ಈ ಕ್ಷೇತ್ರವೂ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿರುವುದರಿಂದ ಈ ವಾರ್ಡಿನ ಅಭಿವೃದ್ದಿಗೆ ಜೆಡಿಎಸ್ ಪಕ್ಷವನ್ನ ಜನಸಾಮಾನ್ಯರು,ಮಹಿಳೆಯರು ಗೆಲ್ಲಿಸುವ ಮೂಲಕ ಹೊಸ ಬದಲಾವಣೆಯನ್ನ ಬಯಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಮಾತನಾಡಿ ಸದಾ ಜನರ ಕಷ್ಟ ಸುಖದಲ್ಲಿ ಪಾಲ್ಗೊಳ್ಳುವಂತಹ ನಾಯಕರುಗಳ ಜೊತೆ ಉತ್ತಮ ಒಡನಾಟ ಹೊಂದಿರುವ ನಾನು ಮತದಾರ ಪ್ರಭುಗಳು ಗೆಲ್ಲಿಸಿದರೆ ಮೂಲ ಭೂತ ಸೌಕರ್ಯಗಳನ್ನ ಮೊದಲು ಈ ವಾರ್ಡ್ ಹಾಕಿ ಅಭಿವೃದ್ದಿ ಮಾಡುತ್ತೇನೆ. ಪರಿಸರಕ್ಕೆ ಒತ್ತುಕೊಟ್ಟು ಗಿಡ-ಮರ ಪೋಷಣೆಯನ್ನ ಮಾಡುವ ಮೂಲಕ ಉತ್ತಮ ಅಭಿವೃದ್ದಿಯನ್ನ ಮತದಾರರ ಸಮ್ಮುಖದಲ್ಲಿ ಖುದ್ದು ನಿಂತು ಕೆಸಲ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರು ಮತ್ತು ಒಡನಾಡಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
