ಹೊಸಪೇಟೆ.
ಲಂಚ ಸ್ವೀಕರಿಸುತ್ತಿದ್ದ ಅಬಕಾರಿ ಇಲಾಖೆ ಜಂಟಿ ಆಯುಕ್ತ ಎಲ್.ಎನ್. ಮೋಹನ್ ಕುಮಾರ್ ಎಸಿಬಿ ಬಲೆಗೆ ಶನಿವಾರ ಬಿದ್ದ ಘಟನೆ ನಡೆದಿದೆ. ಹೊಸಪೇಟೆ ಅಬಕಾರಿ ಜಂಟಿ ಆಯುಕ್ತ ಎಲ್.ಎನ್.ಮೋಹನ್ ಕುಮಾರ್.ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ನಾಲ್ಕು ಜಿಲ್ಲೆಗಳ ಬಾರ್ ವೈನ್ ಶಾಪ್ ನಿಂದ್ ತಿಂಗಳ ಮಾಮೂಲಿ ಸಂಗ್ರಹಿಸಿ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ಭೇಟಿಯಾಡಿದ್ದಾರೆ.
ಮೋಹನ್ ಕುಮಾರ್ ಬಳ್ಳಾರಿ, ಕೊಪ್ಪಳ, ಗದಗ, ದಾವಣಗೇರಿ ಜಿಲ್ಲೆಗಳ ಉಸ್ತುವಾರಿಯಾಗಿದ್ದರು.ಹೊಸಪೇಟೆ ತಾಲೂಕಿನ ಗುಂಡಾ ಅರಣ್ಯ ಬಳಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ನಡೆಸಿದ ದಾಳಿಯಲ್ಲಿ ಬಳ್ಳಾರಿ ಎಸಿಬಿ.ಡಿಎಸ್ಪಿ,ಚಂದ್ರಕಾಂತ್ ಮತ್ತು ಸಿ.ಪಿಐ.ಶ್ರೀಧರ ದೊಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕೆ.ಎ.01ಜಿ.5932 ಸಂಖ್ಯೆಯ ಸರ್ಕಾರಿ ವಾಹನದಲ್ಲಿ 11,36,500 ರೂ ಹಣ ಮತ್ತು ನಾಲ್ಕು ಮೊಬೈಲ್ಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆಪಡೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/07/IMG-20190721-WA0166.gif)