ದಾವಣಗೆರೆ:
ಆಧುನಿಕತೆ ಹಾಗೂ ತಂತ್ರಜ್ಞಾನದ ಭರಾಟೆಯಲ್ಲಿ ಮಾನವೀಯ ಮೌಲ್ಯಗಳು ಮತ್ತು ನೈತಿಕತೆ ಕಣ್ಮರೆಯಾಗುತ್ತಿವೆ ಎಂದು ಸಿರಿಗೆರೆ ಎಂಬಿಆರ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ನಾ.ಲೋಕೇಶ್ ಒಡೆಯರ್ ಆತಂಕ ವ್ಯಕ್ತಪಡಿಸಿದರು.
ನಗರದ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಚೈತ್ರ-2019 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆ ಹಾಗೂ ತಂತ್ರಜ್ಞಾನದ ಯುಗದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾಲ್ಯ, ನೈತಿಕತೆ ಸೇರಿದಂತೆ ಎಲ್ಲವೂ ಸ್ಪರ್ಧೆಗಳೇ ಆಗುತ್ತಿವೆ. ಆದರೆ, ವೈಕ್ತಿಕ ಯಶಸ್ಸಿಗಿಂತ ಮಾನವೀಯ ಮೌಲ್ಯಗಳೇ ಶ್ರೇಷ್ಠೆ ಎಂಬುದನ್ನು ಎಲ್ಲರೂ ಅರಿಯಬೇಕೆಂದು ಕಿವಿಮಾತು ಹೇಳಿದರು.
ಜೀವನದಲ್ಲಿ ಯಾವುದೇ ಕೀಳರಿಮೆಗೆ ಒಳಗಾಗದೇ, ಜ್ಞಾನಾರ್ಜನೆ ಪಡೆಯುವ ಮೂಲಕ ಐಎಎಸ್, ಕೆಎಎಸ್ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಮೂಲಕ ಸಾಧನೆ ಮಾಡಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ನಿಜವಾದ ಕೌಶಲ್ಯ ಹಾಗೂ ಜ್ಞಾನವುಳ್ಳವರು ಎಂದಿಗೂ ಸಹ ನಿರುದ್ಯೋಗಿಗಳಾಗಿ ಉಳಿಯಲು ಸಾಧ್ಯವಿಲ್ಲ. ಆದರೆ, ಸಿಕ್ಕ ಅವಕಾಶವನ್ನು (ಕೆಲಸವನ್ನು) ಪ್ರಮಾಣಿಕವಾಗಿ ನಿಭಾಯಿಸುವ ಮೂಲಕ ಮುಂದೆ ಬರಬೇಕು. ವಿಭಿನ್ನ ಆಲೋಚನೆ ಮೂಲಕ ಸಾಮಥ್ರ್ಯ, ಕೌಶಲ್ಯ, ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದರು.
ಪ್ರಸ್ತುತ ಪೋಷಕರು ತಮ್ಮ ಮಕ್ಕಳನ್ನು ಅಂಕ ಯಂತ್ರಗಳನ್ನಾಗಿ ರೂಪಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಬೇಡದ ವಿಷಯಗಳನ್ನು ಪೋಷಕರ ಒತ್ತಾಯಕ್ಕೆ ಓದುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿಯೂ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆ ಹೊರಹೊಮ್ಮುವುದಕ್ಕೆ ಚೈತ್ರ ಉತ್ತಮ ವೇದಿಕೆಯನ್ನು ಕಲ್ಪಿಸಿದೆ ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳಲ್ಲಿ ಸಾಂಸ್ಕøತಿಕ ಶ್ರೀಮಂತಿಕೆ, ಜೀವನ ಮೌಲ್ಯ ಒಳಗೊಂಡಲ್ಲಿ ಸಮಾಜದಲ್ಲಿ ಮನ್ನಣೆ ದೊರೆಯಲಿದೆ. ಇಲ್ಲದಿದ್ದರೆ, ನಿಮ್ಮನ್ನು ಯಾರೂ ಸಹ ಗೌರವದಿಂದ ಕಾಣುವುದಿಲ್ಲ. ಸುಖ-ದುಃಖಗಳು ಹಗಲು ರಾತ್ರಿಯಂತೆ ಬಂದು ಹೋಗುತ್ತವೆ. ಅವುಗಳನ್ನು ಅನುಭವಿಸುತ್ತಾ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಶಿವಪ್ರಸಾದ್ ದಂಡಗಿ ಮಾತನಾಡಿ, ಚೈತ್ರ ಸಾಂಸ್ಕøತಿಕ ಉತ್ಸವದ ಮೂಲಕ ನಿಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲು ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಇದರ ಸದುಪಯೋಗ ಪಡೆದುಕೊಂಡು, ಕ್ರೀಡೆ, ಸಾಂಸ್ಕøತಿ, ತಾಂತ್ರಿಕ ಚಟುವಟಿಕೆಗಳ ಸ್ಪರ್ಧೆಗಲ್ಲಿ ಭಾಗವಹಿಸಿ, ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರ ತರಬೇಕು. ಆದರೆ, ಪ್ರತಿಯೊಬ್ಬರೂ ಸಹ ಸೋಲು-ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಡಿ.ಪಿ.ನಾಗರಾಜಪ್ಪ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ.ಕೆ.ಮೌನೇಶ್, ಉಪಾಧ್ಯಕ್ಷರಾದ ಜಿ.ಕೆ.ಭುವನೇಶ್ವರಿ, ಆರ್.ವಿ.ವಿಜಯ್, ಕಾರ್ಯದರ್ಶಿ ಕೋರಿ ಸಿದ್ದೇಶ್, ಜಂಟಿ ಕಾರ್ಯದರ್ಶಿಗಳಾದ ನಮಿತ್ ಎಂ.ಪೂಜಾರ್, ದಿವ್ಯಾ ಸಿನ್ಹಾ, ಸಾಂಸ್ಕøತಿಕ ಕಾರ್ಯದರ್ಶಿ ಬಿ.ಎಸ್.ರಶ್ಮಿ, ತಾಂತ್ರಿಕ ಕಾರ್ಯದರ್ಶಿ ಎಸ್.ಎ.ಸಿದ್ದೇಶ್, ಕ್ರೀಡಾ ಕಾರ್ಯದರ್ಶಿ ಜಿ.ಬಿ.ಧನ್ರಾಜ್, ಜಿ.ಜಿ.ಮೇಘನಾ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
