ಅಂಬಿ ಅಂತಿಮ ಯಾತ್ರೆಗೆ ಅಭೂತಪೂರ್ವ ಭದ್ರತೆ

ಬೆಂಗಳೂರು

          ರೆಬಲ್ ಸ್ಟಾರ್ ಅಂಬರೀಶ್ ಅವರ ಅಂತ್ಯಕ್ರಿಯೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ಅಭೂತಪೂರ್ವ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಪ್ರಾರ್ಥಿವ ಶರೀರದ ಮೆರವಣಗೆ ನಡೆಯುವ ಮಾರ್ಗದುದ್ದಕ್ಕೂ ಶೂನ್ಯ ಸಂಚಾರ ವ್ಯವಸ್ಥೆ ಕಲ್ಲಿಸಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

         ಮಂಡ್ಯದಿಂದ ಸೇನಾ ಹೆಲಿಕಾಪ್ಟರ್‍ನಲ್ಲಿ ಬಂದ ಮೃತದೇಹವನ್ನು ಶೂನ್ಯ ಸಂಚಾರ ವ್ಯವಸ್ಥೆ ಮೂಲಕ ಕಂಠೀರವ ಕ್ರೀಡಾಂಗಣಕ್ಕೆ ತಂದು ಅಲ್ಲಿಂದ ಮೆರವಣಿಗೆಯು ಹಡ್ಸನ್ ವೃತ್ತ, ಹಲಸೂರು ಗೇಟ್- ಕೆ.ಜಿ. ರಸ್ತೆ-ಮೈಸೂರು ಬ್ಯಾಂಕ್ ವೃತ್ತ- ಪ್ಯಾಲೇಸ್ ರೋಡ್- ಸಿಐಡಿ ಜಂಕ್ಷನ್, ಬಸವೇಶ್ವರ ಸರ್ಕಲ್- ಒಲ್ಡ್ ಹೈಗೌಂಡ್ಸ್- ವಿಂಡರ್ಸ್ ಮ್ಯಾನರ್, ಕಾವೇರಿ ಜಂಕ್ಷನ್- ಬಾಷ್ಯಂ ವೃತ್ತ- ಸ್ಯಾಂಕಿ ರಸ್ತೆ- ಮಾರಮ್ಮ ವೃತ್ತ-ಬಿಎಚ್‍ಇಎಲ್- ಯಶವಂತಪುರ ಮೇಲು ಸೇತುವೆ- ಆರ್‍ಎಂಸಿ ಯಾರ್ಡ್, ಗೊರಗುಂಟಪಾಳ್ಯ, ಸಿಎಂಟಿಐ-ಎಫ್‍ಟಿಐ ಮೂಲಕ ಕಂಠೀರವ ಸ್ಟುಡಿಯೋ ವರೆಗೆ ನಡೆಸಲಾಯಿತು.

         ಮೃತದೇಹದ ಮೆರವಣಿಗೆಯು ಸುಮಾರು 3 ಗಂಟೆಗಳ ಕಾಲ ಸಾಗಿದ್ದು ಈ ಮಾರ್ಗದುದ್ದಕ್ಕೂ ರಸ್ತೆಯ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಪೊಲೀಸರು ರಸ್ತೆಗೆ ಅಭಿಮಾನಿಗಳು ನುಗ್ಗದಂತೆ ಭದ್ತತೆ ಕೈಗೊಂಡಿದ್ದರು ಮರೆವಣಿಗೆಯ ವಾಹನದ ಹಿಂದೆ ಸಾವಿರಾರು ಮಂದಿ ನಡೆದುಕೊಂಡು ಹೊರಟರೆ ರಸ್ತೆಯ ಇಕ್ಕೆಲೆಗಳಲ್ಲಿ ಸಾರ್ವಜನಿಕರು ಸಾಲುಗಟ್ಟಿ ನಿಂತು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

        ಹಡ್ಸನ್‍ವೃತ್ತದಿಂದ ಸಾಗಿದ ಮೆರವಣಿಗೆಯು ಎಲ್ಲೂ ನಿಲ್ಲದೆ ಸಾಗಿದ್ದು, ಒಂದು ರಸ್ತೆಯಿಂದ ಮತ್ತೊಂದು ರಸ್ತೆಯವರೆಗೆ ಒಬ್ಬೊಬ್ಬ ಡಿಸಿಪಿಯು ಭದ್ರತೆ ಜವಾಬ್ದಾರಿ ವಹಿಸಿಕೊಂಡು ರಸ್ತೆಗಳಲ್ಲಿ ಜನ ಸೇರದಂತೆ ಮುಂಜಾಗೃತ ಕ್ರಮ ಕೈಗೊಂಡಿದ್ದರು.

       ಸುಮಾರು 15 ಮಂದಿ ಡಿಸಿಪಿಗಳು ಒಂದೊಂದು ವೃತ್ತಗಳ ಜವಾಬ್ದಾರಿ ವಹಿಸಿಕೊಂಡಿದ್ದು ಆವರ ಮೇಲೆ ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು ನಿಗಾವಹಿಸಿದ್ದರು ಮೆರೆವಣಿಗೆ ಸಾಗುವ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಿ ಯಾವೊಂದು ವಾಹನವು ಮೆರವಣಿಗೆ ರಸ್ತೆಗಳಲ್ಲಿ ನುಗ್ಗುವುದಾಗಲಿ ನಿಲುಗಡೆ ಮಾಡುವುದಕ್ಕಾಗಲಿ ಅವಕಾಶ ನೀಡಿರಲಿಲ್ಲ.

      ನಗರದಲ್ಲಿ ಸಂಚಾರ ದಟ್ಟನೆ ಉಂಟಾಗುವುದನ್ನು ತಡೆಯಲು ಮೃತದೇಹದ ಮೆರವಣಿಗೆಯು ಕಚೇರಿಗಳ ಸಮಯದ ನಂತರ ಆರಂಭಕ್ಕೆ ಪೊಲೀಸರು ಮುಂದಾಗಿ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು ಕುಮಾರಸ್ವಾಮಿ ಅವರು ಪೊಲೀಸರ ಸಲಹೆಯಂತೆ ಮಂಡ್ಯದಿಂದ ಮೃತದೇಹ ಹೊರಡುವುದನ್ನು 2 ಗಂಟೆಗಳ ಕಾಲ ತಡ ಮಾಡಿದ್ದರು.

     ಅಂಬರೀಶ್ ಅವರ ಅಂತ್ಯಸಂಸ್ಕಾರವು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುಗಮವಾಗಿ ನಡೆಯಲು ಮುಂಜಾಗೃತ ಕ್ರಮವಾಗಿ ಕಂಠೀರವ ಸ್ಟುಡಿಯೋ ಸುತ್ತಮುತ್ತ 11 ಸಾವಿರ ಪೊಲೀಸರನ್ನು ಮೆರವಣಿಗೆ ವೇಳೆ ಸಂಚಾರ ವ್ಯವಸ್ಥೆಗೆ ಸುಮಾರು 4 ಸಾವಿರ ಸಂಚಾರ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

       ಸುಮಾರು 13 ಕಿಲೋಮೀಟರ್‍ವರೆಗೆ ಮೃತದೇಹದ ಮೆರವಣಿಗೆಯು ಸಾಗಿ ಕಂಠೀರವ ಸ್ಟುಡಿಯೋಗೆ ತಲುಪಿತು ನಗರ ಪೊಲೀಸರ ಜೊತೆಗೆ 30 ರಾಜ್ಯ ಮೀಸಲು ಪಡೆಯ ತುಕಡಿ,34ನಗರ ಸಶಸ್ತ್ರ ಮೀಸಲು ಪಡೆ ತುಕಡಿ,3 ಕ್ಷಿಪ್ರ ಕಾರ್ಯಪಡೆ(ಆರ್‍ಎಎಫ್ )ತುಕಡಿ,5 ಕ್ಷಿಪ್ರ ಕಾರ್ಯಪಡೆ ಗಸ್ತುವಾಹನಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ತಿಳಿಸಿದ್ದಾರೆ.

       ಹೂಗಳಿಂದ ಸಿಂಗಾರ: ಹಿರಿಯ ನಟ ಹಾಗು ಮಾಜಿ ಸಚಿವ ಅಂಬರೀಶ್ ಪಾರ್ಥಿವ ಶರೀರದ ಮೆರವಣಿಗೆ ನಡೆಸಿದ ಗಾಜಿನ ವಾಹನವನ್ನು ರಾಷ್ಟ್ರಧ್ವಜದ ಬಣ್ಣಗಳಾದ ಕೇಸರಿ ಬಿಳಿ ಹಸಿರಿನಲ್ಲಿ ಸಿಂಗರಿಸಲಾಗಿತ್ತು.

       ಸುಮಾರು 1800 ಕೆಜಿಯಷ್ಟು ಕೇಸರಿ ಬಿಳಿ ಹೂವು ಹಸಿರು ಬಣ್ಣಕ್ಕೆ ತುಳಸಿ ಪತ್ತೆ ಬಳಸಲಾಗಿತ್ತು ಸೇವಂತಿಗೆ, ಚೆಂಡು ಹೂ, ತುಳಸಿಹಾರ, ಬಿಳಿ ಹೂ ಸೇರಿದಂತೆ ಕೆಲ ಅಲಂಕಾರಿಕ ಹೂವುಗಳನ್ನು ಬಳಸಿ ಪಾರ್ಥಿವ ಶರೀರ ಕಾಣುವಂತೆ ಗಾಜಿನ ಭಾಗವನ್ನು ಬಿಟ್ಟು, ವಾಹನವನ್ನು ಸಿಂಗರಿಸಿ ಪಾರ್ಥಿವ ಶರೀರವನ್ನು ಇಡಲು ಗಾಜಿನ ಫ್ರೀಜರ್ ಬಾಕ್ಸ್ ತರಲಾಗಿದ್ದು, ಅದನ್ನು ಕೂಡ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.

       ಹೆಚ್.ಎ. ಎಲ್ ವಿಮಾನ ನಿಲ್ದಾಣದಿಂದ ಕಂಠೀರವ ಕ್ರೀಡಾಂಗಣಕ್ಕೆ ಆಂಬ್ಯುಲೆನ್ಸ್‍ನಲ್ಲಿ ಬಂದ ಪಾರ್ಥಿವ ಶರೀರವನ್ನು ಸಿಂಗರಿಸಿದ ವಾಹನದಲ್ಲಿ ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋದವರೆಗೆ ಮೆರವಣಿಗೆ ನಡೆಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link