ಚಳ್ಳಕೆರೆ
ಗಂಡುಮೆಟ್ಟಿನ ನಾಡು ಚಿತ್ರದುರ್ಗದಿಂದ ಚಲನಚಿತ್ರ ರಂಗಪ್ರವೇಶಿಸಿದ ಈ ನಾಡು ಕಂಡ ಅಪ್ರತಿಮನಟ ಕೇಂದ್ರದ ಮಾಜಿ ಸಚಿವ ನಟ ಅಂಬರೀಷ್ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿತ್ತು. ನಟ ಅಂಬರೀಷ್ಗೆ ಚಳ್ಳಕೆರೆಯ ನಂಟು ಸಹ ಹೆಚ್ಚಿನ ಪ್ರಮಾಣದಲ್ಲಿ ಇತ್ತು.
ಕಳೆದ 2016ರ ನವೆಂಬರ್ ಮಾಹೆಯಲ್ಲಿ ಚಳ್ಳಕೆರೆ ನಗರಕ್ಕೆ ಆಗಮಿಸಿದ ಅವರು ಕೆಲವಾರು ಗಂಟೆಗಳ ಕಾಲ ಇಲ್ಲಿನ ಅಭಿಮಾನಿಗಳೊಂದಿಗೆ ಬೆರೆತು ಮುಕ್ತವಾಗಿ ಚರ್ಚೆ ನಡೆಸಿದರು.
ನಿರೀಕ್ಷೆಗೂ ಮೀರಿ ಸಾವಿರಾರು ಸಂಖ್ಯೆಯಲ್ಲಿ ಬಂದ ಎಲ್ಲರಿಗೂ ಸಹ ಹಸ್ತಲಾಗವ ನೀಡಿ ಮುಗುಳು ನಗುತ್ತಲೇ ಎಲ್ಲರೊಂದಿಗೆ ಬೆರೆಯುತ್ತಿದ್ದ ಈ ಸ್ನೇಹ ಜೀವಿ ಇನ್ನು ಕೇವಲ ನೆನಪು ಮಾತ್ರ.
ಚಲನಚಿತ್ರ ರಂಗದ ಖಳ ಹಾಗೂ ಹಾಸ್ಯ ನಟ ದೊಡ್ಡಣ್ಣನವರು ಸಹ ಅಪಾರವಾದ ಅಭಿಮಾನಿಗಳನ್ನು ಹೊಂದಿದ್ಧಾರೆ. ಅವರ ಅಳಿಯ ಯುವ ವಾಣಿಜ್ಯೋದ್ಯಮಿ ಕೆ.ಸಿ.ವೀರೇಂದ್ರ(ಪಪ್ಪಿ) 2 ನವೆಂಬರ್ 2016ರಂದು ಎರಡು ಮನೆಗಳ ತಮ್ಮ ಸಹೋದರರಿಗಾಗಿ ನಿರ್ಮಿಸಿ ಮನೆಗಳ ಗೃಹ ಪ್ರವೇಶಕ್ಕೆ ರಾಷ್ಟ್ರದ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಚಲನಚಿತ್ರ ರಂಗದ ಅನೇಕ ಗಣ್ಯರನ್ನು ಆಹ್ವಾನಿಸಿದ್ದರು. ಈ ಹಿನ್ನೆಲ್ಲೆಯಲ್ಲಿ ಚಳ್ಳಕೆರೆಗೆ ಆಗಮಿಸಿದ ಅಂಬರೀಷ್ ಕೆಲವಾರು ಗಂಟೆಗಳ ಕಾಲ ಇಲ್ಲಿನ ಸ್ನೇಹಿತರು ಹಾಗೂ ಅಭಿಮಾನಿಗಳೊಂದಿಗೆ ಬೆರೆತು ಎಲ್ಲರೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಚಲನಚಿತ್ರ ನಟ ದೊಡ್ಡಣ್ಣ, ನಟಿ ತಾರಾದೇವಿ, ಮಾಳ್ವಿಕ, ಅವಿನಾಶ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಆಗಮಿಸಿದ್ದರು. ಇಂದಿಗೂ ಸಹ ಇಲ್ಲಿನ ಜನತೆ ಅಂಬರೀಷ್ರವರ ಭೇಟಿಯನ್ನು ಸದಾ ನೆನಪಿಸಿಕೊಳ್ಳುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ