ನೇಣಿಗೆ ಶರಣಾದ ಅಂಗನವಾಡಿ ಕಾರ್ಯಕರ್ತೆ

ತಿಪಟೂರು

    ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ, ಕರಡಾಳುಸಂತೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಎಂಬಾಕೆ ಬುಧವಾರ ಬೆಳಗ್ಗೆ ತಾನು ಕಾರ್ಯ ನಿರ್ವಹಿಸುತ್ತಿದ್ದ ಅಂಗನವಾಡಿ ಕೇಂದ್ರದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಎಂದಿನಂತೆ ಕೆಲಸಕ್ಕೆ ಆಗಮಿಸಿ ಅಂಗನವಾಡಿ ಸಹಾಯಕಿಗೆ ಮೊಟ್ಟೆ ಕೊಟ್ಟು ಬರಲು ಕಳುಹಿಸಿ ತಾನು ಅಂಗನಾಡಿ ಕೇಂದ್ರದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಬಗ್ಗೆ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಜಾರಿಯಲ್ಲಿದೆ.

    ಮೃತಳ ಪತಿ ನರಸಿಂಹಮೂರ್ತಿ ಹೇಳಿಕೆಯ ಪ್ರಕಾರ ಮೃತಪಟ್ಟ ಮಂಜುಳಾ (45) ಸುಮಾರು 15-16 ವರ್ಷಗಳಿಂದ ಕರಡಾಳು ಸಂತೆ ಮೈದಾನದ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ 3-4 ತಿಂಗಳುಗಳಿಂದ ಮೈ ಉರಿ ಬರುತ್ತಿದ್ದು, ತಿಪಟೂರು ಮತ್ತು ತುಮಕೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆವು. ಈ ಕಾಯಿಲೆಯು ಕಳೆದ ಒಂದು ತಿಂಗಳಿಂದ ಜಾಸ್ತಿಯಾಗಿದ್ದು ಚಿಕಿತ್ಸೆ ಕೊಡಿಸುವಾಗ ರಕ್ತಹೀನತೆ ಇದ್ದು ರಕ್ತವನ್ನು ಹಾಕಿಸಬೇಕೆಂದು ವೈದ್ಯರು ಹೇಳಿದ ಮೇಲೆ ಪ್ರತಿ 15 ದಿಕ್ಕೊದು ಬಾಟಲಿಯಂತೆ ರಕ್ತವನ್ನು ಕೊಡಿಸುತ್ತಿದ್ದವು. ಆದರೆ ಇದು ಹುಷಾರಾಗುವ ಕಾಯಿಲೆಯಲ್ಲ ಎಂದು ತಿಳಿದು ತುಂಬಾ ಬೇಜಾರು ಮಾಡಿಕೊಂಡು ಈ ಕೆಲಸ ಮಾಡಿ ಕೊಂಡಿದ್ದಾರೆಂದು ತಿಳಿಸಿದ್ದಾರೆ.

    ಇನ್ನೊಂದು ಕಡೆ ಮೃತ ಅಂಗನವಾಡಿ ಕಾರ್ಯಕರ್ತೆಗೆ ಮೇಲಧಿಕಾರಿಗಳ ಒತ್ತಡವನ್ನು ನಿಭಾಯಿಸಲಾಗದೆ ನೇಣಿಗೆ ಶರಣಾಗಿದ್ದಾಳೆಂದು ಇದರ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link