ಚಿತ್ರದುರ್ಗ
ಇಂದಿನ ಆಧುನಿಕ ಕಾಲದಲ್ಲೂ ಬೆರಳಚ್ಚು ಮತ್ತು ಶೀಘ್ರಲಿಪಿಕಾರರ ಸೇವೆ ಅಗತ್ಯವಾಗಿದೆ ಎಂದು ಬೆಂಗಳೂರಿನ ಕೈಗಾರಿಕಾ ಟ್ರಿಬ್ಯುನಲ್ ಕೋರ್ಟ್ನ ನ್ಯಾಯಾೀಶ ಹಂಚಾಟೆ ತಿಳಿಸಿದರು.
ಬೆರಳಚ್ಚು ಮತ್ತು ಶೀಘ್ರಲಿಪಿಯನ್ನು ಕಲಿಸುತ್ತಿರುವ ನಗರದ ವಿಠ್ಠಲ್ ವಾಣಿಜ್ಯ ವಿದ್ಯಾ ಸಂಸ್ಥೆಗೆ ಈಗ 90 ವರ್ಷಗಳು ಇದರ ಅಂಗವಾಗಿ ನಗರದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಒಂದು ಸಂಸ್ಥೆ 90 ಪೂರ್ಣ ಮಾಡುವುದು ಅಂದರೆ ಸುಲಭದ ಮಾತಲ್ಲ, ಸಂಸ್ಥೆಯನ್ನು ಪ್ರಾರಂಭ ಮಾಡುವುದು ಕಷ್ಟವಾದರೂ ಅದನ್ನು ಮುನ್ನೆಡೆಸುವುದು ಇನ್ನು ಕಷ್ಟದ ಕೆಲಸವಾಗಿದೆ. ಇದರ ಮಧ್ಯೆದಲ್ಲಿ ಯುವಜನತೆಗೆ ಅಗತ್ಯವಾದ ಶಿಕ್ಷಣವನ್ನು ನೀಡುವುದರ ಮೂಲಕ ಬಹಳಷ್ಟು ಜನತೆಗೆ ದಾರಿ ದೀಪವಾಗಿದ್ದಾರೆ ಎಂದು ಹೇಳೀದರು.
ಈ ಸಂಸ್ಥೆಯನ್ನು ಈಗ ಮೂರನೇ ತಲೆ ಮಾರು ನಡೆಸಿಕೊಂಡು ಬರುತ್ತಿದೆ, ಇದು ಇಲ್ಲಿಗೆ ನಿಲ್ಲದೆ ನಿರಂತರವಾಗಿ ನಡೆಯವುದರ ಮೂಲಕ ಯುವಜನತೆಗೆ ದಾರಿ ದೀಪವಾಗಬೇಕಿದೆ, 90 ವರ್ಷದ ಹಿಂದೆ ದೂರ ದೃಷ್ಟಿಯಿಂದ ಅಂದು ಪ್ರಾರಂಭವಾದ ಈ ಸಂಸ್ಥೆ ಉತ್ತಮವಾದ ಕಾರ್ಯವನ್ನು ಮಾಡಿದೆ ಈಗಲೂ ಮಾಡುತ್ತಿದೆ ಇದರಲ್ಲಿ ಕಲಿತ ಹಲವಾರು ಜನತೆ ತಮ್ಮ ಬದುಕನ್ನು ಕಂಡುಕೊಂಡಿದ್ದಾರೆ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಎಂದ ಅವರು ಕುಶಲತೆ ಇದ್ದಲ್ಲಿ ಎಲ್ಲಿಯಾದರೂ ಸಹಾ ಜೀವನ ನಡೆಸಬಹುದು ಅದಕ್ಕೆ ಮೂದಲು ಉತ್ತಮವಾದ ಸಂಸ್ಥೆಗಳಲ್ಲಿ ತರಬೇತಿಯನ್ನು ಪಡೆಯುವುದು ಅಗತ್ಯವಾಗಿದೆ ಸಂಸ್ಥೆಗಳು ಸಹಾ ತಮ್ಮಲ್ಲಿ ಕಲಿಯಲು ಬರುವವರಿಗೆ ಮುಂದೆ ಯಾವುದೆ ಸಮಸ್ಯೆಯಾಗದಂತೆ ಮಾರ್ಗದರ್ಶನ ನೀಡಬೇಕಿದೆ ಎಂದು ಕಿವಿ ಮಾತು ಹೇಳಿದರು.
ವಿಠ್ಠಲ್ ಬೆರಳಚ್ಚು ಮತ್ತು ಶೀಘ್ರಲಿಪಿ ವಾಣಿಜ್ಯ ವಿದ್ಯಾಸಂಸ್ಥೆಯು ಇಚ್ಛಾಶಕ್ತಿ ಮತ್ತು ಸಮರ್ಪಣಾ ಮನೋಭಾವದಿಂದ ಪ್ರಬುದ್ಧ ವಿದ್ಯಾರ್ಥಿಗಳನ್ನು ಸೃಷ್ಠಿಸಿದೆ. ಮುಖ್ಯವಾಗಿ ನ್ಯಾಯಾಂಗ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ಬೆರಳಚ್ಚು ಮತ್ತು ಶೀಘ್ರಲಿಪಿಗಾರರು ಕೆಲಸ ಮಾಡುತ್ತಿದ್ದಾರೆ. ನ್ಯಾಯಾೀಶರ ಕೆಲಸ ಕಡಿಮೆ ಮಾಡುವಲ್ಲಿಯೂ ಇದು ಸಹಕಾರಿ ಆಗಿದೆ. ಪ್ರಜಾಪ್ರಭುತ್ವದ ಸದೃಢತೆಗೆ ಬೆರಳಚ್ಚು ಮತ್ತು ಶೀಘ್ರಲಿಪಿ ಕೊಡುಗೆ ಅಪಾರ ಎಂದರು.
ಸಂವಿಧಾನದ ನಾಲ್ಕನೆ ಅಂಗ ಪತ್ರಿಕಾ ರಂಗವನ್ನು ಕೂಡ ಸದೃಢಗೊಳಿಸುವಲ್ಲಿ ಬೆರಳಚ್ಚು ಮತ್ತು ಶೀಘ್ರಲಿಪಿ ಪಾತ್ರ ಬಹಳ ಮುಖ್ಯ. ಯಾರೇ ಆಗಲಿ ತಮ್ಮ ಕೆಲಸವನ್ನು ತಲ್ಲೀನತೆಯಿಂದ ಮಾಡಿದಾಗ ಯಶಸ್ಸು ಗಳಿಸಬಹುದು ಎನ್ನುವುದಕ್ಕೆ ಈ ವಿಠ್ಠಲ್ ಸಂಸ್ಥೆಯು ಸಾಕ್ಷಿಯಾಗಿದೆ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾೀಶ ಎಸ್.ಬಿ.ವಸ್ತ್ರಮಠ ಸಂಸ್ಥೆ ಕಟ್ಟುವುದು ಕಷ್ಟ ಅದನ್ನು ನಿರಂತರವಾಗಿ ಉಳಿಸಿ ಬೆಳೆಸಿಕೊಂಡು ಹೋಗುವುದು ಈಗಿನ ಸಮಾಜದಲ್ಲಿ ತುಂಬಾ ಕಷ್ಟ ಇಂದಿನ ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ ಕಾಲದಲ್ಲಿ ಟೈಪಿಂಗ್ ಮೆಷಿನ್ಗಳು ಮೂಲೆ ಗುಂಪಾಗುತ್ತಿದೆ. ತಂತ್ರಜ್ಞಾನ ಇನ್ನಷ್ಟು ಮುಂದುವರೆಯುತ್ತಿದೆ. ಇಂತಹ ಸಂದರ್ಭದಲ್ಲಿ ವಿಠ್ಠಲ್ ಬೆರಳಚ್ಚು ಮತ್ತು ಶೀಘ್ರಲಿಪಿ ವಾಣಿಜ್ಯ ವಿದ್ಯಾಸಂಸ್ಥೆ ತನ್ನ ಅಸ್ಥಿತ್ವ ಉಳಿಸಿಕೊಂಡಿರುವುದು ದೊಡ್ಡ ಕೆಲಸ. ಭವಿಷ್ಯದಲ್ಲಿ ಇನ್ನೂ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವಂತಾಗಬೇಕು ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಒ ಪಿ.ಎನ್.ರವೀಂದ್ರ ಮಾತನಾಡಿ, ಬೆರಳಚ್ಚು ಮತ್ತು ಶೀಘ್ರಲಿಪಿ ಎರಡು ಕೂಡ ಸರಕಾರಿ, ಖಾಸಗಿ ಸಂಸ್ಥೆಗಳ ತ್ವರಿತ ಆಡಳಿತಕ್ಕೆ ಬೇಕಾಗಿರುವ ಅಂಶಗಳು. ವಿದ್ಯೆ, ಬೆರಳಚ್ಚು, ಶೀಘ್ರಲಿಪಿ ಸೇರಿದಂತೆ ಕಲಿತಂತಹ ಎಲ್ಲಾ ವಿದ್ಯೆಗಳು ಜೀವನದಲ್ಲಿ ಉಪಯೋಗಕ್ಕೆ ಬರುತ್ತವೆ. ಮನಸ್ಸಿನ ಏಕಾಗ್ರತೆ ಬೆಳೆಸುವಲ್ಲಿ ಬೆರಳಚ್ಚು ಮತ್ತು ಶೀಘ್ರಲಿಪಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ತುಮಕೂರಿನ ಚಿಂತಕ ನಿಕೇತ್ರಾಜ್ ಮಾತನಾಡಿ, ಯಾರೇ ಆಗಲಿ ಆತ್ಮವಿಶ್ವಾಸ ಮತ್ತು ಕಮಿಟ್ಮೆಂಟ್ನಿಂದ ಜೀವನದಲ್ಲಿ ಮೇಲೆ ಬರಲು ಸಾಧ್ಯ. ಈ ಸಂಸ್ಥೆ ಬಹಳಷ್ಟು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟಿದೆ. ಸಂಭಾವನೆಗಿಂತ ಹೆಚ್ಚಿನದಾಗಿ ಭಾವನೆಗಾಗಿ ಕೆಲಸ ಮಾಡಿದೆ ಎಂದು ಹೇಳಿದರು.
ಕರ್ನಾಟಕ ವಾಣಿಜ್ಯ ವಿದ್ಯಾಶಾಲೆಗಳ ಸಂಘದ ಅಧ್ಯಕ್ಷ ಆರ್.ಎಸ್.ಯೋಗೀಶ್ ಮಾತನಾಡಿ, ಇಂದಿನ ಕಂಪ್ಯೂಟರ್ ಯುಗದಲ್ಲಿ ಬೆರಳಚ್ಚು ಕಲಿಯುವವರು ಪ್ರಮಾಣ ಕಡಿಮೆಯಾಗಿದೆ. ಆದರೆ ಬೆರಳಚ್ಚು ಕಲಿತರೆ ಕಂಪ್ಯೂಟರ್ ಕೆಲಸ ಮಾಡಲು ಸುಲಭ ಆಗಲಿದೆ ಎನ್ನುವುದನ್ನು ಅರಿಯಬೇಕು ಎಂದು ತಿಳಿಸಿದರು.
ಆರಂಭದಲ್ಲಿ ಜಿಲ್ಲಾ ಪೊಲೀಸ್ ಅೀಕ್ಷಕ ಡಾ.ಕೆ.ಅರುಣ್ ಮಾತನಾಡಿ, ದೇಶದ ಸ್ವತಂತ್ರಕ್ಕಿಂತ ಮುಂಚೆಯೇ ಆರಂಭವಾಗಿದ್ದ ಈ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೆರಳಚ್ಚು ಮತ್ತು ಶೀಘ್ರಲಿಪಿ ಕಲಿತು ನಾನಾ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂಸ್ಥೆಯ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದರು.
ವಿಠ್ಠಲ್ ಬೆರಳಚ್ಚು ಮತ್ತು ಶೀಘ್ರಲಿಪಿ ವಾಣಿಜ್ಯ ವಿದ್ಯಾಸಂಸ್ಥೆಯ ಪ್ರಾಚಾರ್ಯ ಆರ್.ಎಂ.ಶ್ಯಾಮ್ ಮಾತನಾಡಿ, ಬೆರಳಚ್ಚು ಮತ್ತು ಶೀಘ್ರಲಿಪಿ ಬೆಳವಣಿಗೆಗೆ ಸರಕಾರ ಈವರೆಗೆ ಯಾವುದೇ ಗಮನಹರಿಸಿಲ್ಲ. ಮುಂದಿನ ದಿನಗಳಲ್ಲಾದರೂ ಸರಕಾರ ಇದರ ಬಗ್ಗೆ ಆಧ್ಯತೆ ನೀಡುವ ಮೂಲಕ ಬೆರಳಚ್ಚು ಮತ್ತು ಶೀಘ್ರಲಿಪಿ ಬೆಳವಣಿಗೆಗೆ ಸಹಕಾರಿ ಆಗಬೇಕು ಎಂದು ಆಗ್ರಹಿಸಿದರು.
ವಿಠ್ಠಲ್ ಬೆರಳಚ್ಚು ಮತ್ತು ಶೀಘ್ರಲಿಪಿ ವಾಣಿಜ್ಯ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷೆ ಲೀಲಾ ಮನೋಹರ್ ಅವರು ಸಂಸ್ಥೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ವಾರ್ಷಿಕೋತ್ಸವ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ವಿದ್ವಾನ್ ಎಂ.ದ್ವಾರಕೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ಷಿಕೋತ್ಸವ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ್ ಅವರು ಸಂಸ್ಥೆಯ ವರದಿ ಓದಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಹಳೆಯ ವಿದ್ಯಾರ್ಥಿ, ಮಾಜಿ ಸೈನಿಕ ವಿ.ಹರೀಶ್ರನ್ನು ಸನ್ಮಾನಿಸಲಾಯಿತು.ಆರ್.ಕೆ.ಬಾಲಸುಂದರ್, ಆರ್.ಕೆ.ತುಕರಾಂ, ಆರ್.ಕೆ.ರಾಮ್ರಾವ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
