ತಾಲ್ಲೂಕಿನ ಕೂನಿಕೆರೆಗ್ರಾಮದಲ್ಲಿ : ಆಂಜನೇಯ ರಥೋತ್ಸವ

ಹಿರಿಯೂರು :

       ತಾಲ್ಲೂಕಿನ ಶ್ರೀಕ್ಷೇತ್ರ ಕೂನಿಕೆರೆ ಆಂಜನೇಯಸ್ವಾಮಿ, ಕಾಟಲಿಂಗೇಶ್ವರಸ್ವಾಮಿ, ಭೂತರಾಯಸ್ವಾಮಿ, ಲಕ್ಷ್ಮೀದೇವರ ರಥೋತ್ಸವ ಇದೇ 27ರ ಶನಿವಾರ ಭಕ್ತಿಭಾವದಿಂದ ನಡೆಯಲಿದೆ ಎಂಬುದಾಗಿ ದೇವಸ್ಥಾನಸಮಿತಿಯವರು ತಿಳಿಸಿದ್ದಾರೆ.

       24ರಂದು ಕಂಕಣೋತ್ಸವ ಹೋಮ, 25ರಂದು ಪಂಚಾಮೃತ ಅಭಿಷೇಕ, ಪ್ರಾಕಾರೋತ್ಸವ, 26ರಂದು ಅಶ್ವವಾಹನೋತ್ಸವ, ಗಂಗಾಪೂಜೆ, ಜಲಧಿ ಉತ್ಸವ, ಮುಳ್ಳು ಪಲ್ಲಕ್ಕಿ ಉತ್ಸವ, 28ರಂದು ಸಹಸ್ರನಾಮಾರ್ಚನೆ, ಪುಷ್ಪಯಾಗ ಸೇವೆ, ಉಂಡೆಮಂಡೆ, 29ರಂದು ವಸಂತೋತ್ಸವ ಓಕುಳಿ, ಕಂಕಣ ವಿಸರ್ಜನೆ ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಇದರ ಅಂಗವಾಗಿ ಪಾಂಡುರಂಗ ಭಜನೆ ಹಾಗೂ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap