ನೆಲಮಂಗಲ :
ಬೆಂಗಳೂರಿನ ಬೆಂಳ್ಳಂದೂರಿನ ಬಳಿಯ ನೊರೆ ಸಮಸ್ಯೆ ಇನ್ನೂ ಹಾಗೆಯೇ ಇದೆ. ಆಗಾಗ ಮತ್ತೆ ಮತ್ತೆ ನೊರೆ ಏಳುತ್ತಲೇ ಇದೆ. ಇದರ ಮಧ್ಯೆ ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಅಮಾನಿಕೆರೆ ಹಾಗೂ ಬಿನ್ನಮಂಗಲ ಕರೆಯಲ್ಲಿ ಭಾರೀ ನೊರೆ ಹೊರ ಬರುತ್ತಿದೆ.
ನೆಲಮಂಗಲದ ಹೊರವಲದಯದಲ್ಲಿರುವಂತ ಅಮಾನಿಕೆರೆ ಭರ್ತಿಯಾಗಿ ನೀರು ಹೊರ ಬರುತ್ತಿವೆ. ಇಂತಹ ನೀರು ಹೊರ ಬರುತ್ತಿರುವ ಬಳಿಯಲ್ಲಿಯೇ ನೊರೆ ಕೂಡ ಎದ್ದಿದೆ. ನೊರೆ ಅಕ್ಕ ಪಕ್ಕದ ಸ್ಥಳೀಯ ನಿವಾಸಗಳತ್ತ ಹಾರಿ ಬರುತ್ತಿರುವುದರಿಂದ, ಜನರಲ್ಲಿ ಆತಂಕ ಕೂಡ ಮನೆಮಾಡಿದೆ.
ಕಳೆದ ಶುಕ್ರವಾರ ಸುರಿದಂತ ಭಾರೀ ಮಳೆಯಿಂದಾಗಿ ಅಮಾನಿಕೆರೆ ಹಾಗೂ ಭಿನ್ನಮಂಗಲ ಕೆರೆ ಭರ್ತಿಯಾಗಿ ಕೋಡಿ ಬಿದ್ದು ನೀರು ಹೊರ ಹರಿಯುತ್ತಿದೆ. ಇದರ ಒಟ್ಟಿಗೆ ನೊರೆ ಕೂಡ ಹಾರಿ ಬರುತ್ತಿದೆ. ಕೆರೆ ಮಲಿನಗೊಂಡಿರುವುದರಿಂದಲೇ ನೊರೆ ಏಳುತ್ತಿರುವುದಕ್ಕೆ ಕಾರಣ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
