ಶ್ರೀನಿವಾಸ್ ಗೌಡಗೆ ಮತ್ತೊಂದು ನೋಟಿಸ್ ಜಾರಿ

ಬೆಂಗಳೂರು:

         ಆಪರೇಷನ್ ಕಮಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ವಿಚಾರಣೆಗೆ ಹಾಜರಾಗುವಂತೆ ಕೋಲಾರ ಶಾಸಕ ಶ್ರೀನಿವಾಸ್ ಗೌಡಗೆ ಮತ್ತೊಂದು ನೋಟಿಸ್ ಜಾರಿ ಮಾಡಿದೆ.

        ಆಪರೇಷನ್ ಕಮಲದ ಮೂಲಕ ಶಾಸಕ ಶ್ರೀನಿವಾಸಗೌಡ ಬಿಜೆಪಿಗೆ ಸೇರಲು ಬರೋಬ್ಬರಿ 50 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು. ಆದ್ರೆ, ಕಮಲ ನಾಯಕರು 30ಕೋಟಿ ನೀಡುವುದಾಗಿ ಒಪ್ಪಿಕೊಂಡಿದ್ದರು.ನಂತರ 5 ಕೋಟಿ ಮುಂಗಡ ಹಣ ಪಡೆದ ಶಾಸಕ ಶ್ರೀನಿವಾ ಸಗೌಡ ಬಿಜೆಪಿಗೂ ಸೇರದೆ ಹಣವನ್ನೂ ಹಿಂದಿರುಗಿಸದೆ ಬಿಜೆಪಿಗೆ ನಾಮ ಇಟ್ಟಿದ್ದಾರೆ ಎನ್ನಲಾಗ್ತಿದೆ.

         ಬಿಜೆಪಿ ನಾಯಕರ ಒತ್ತಾಯಕ್ಕೆ ರೋಸಿಹೋಗಿ ಪತ್ರಿಕಾಗೋಷ್ಟಿಯಲ್ಲಿ ನಮ್ಮ ಮನೆಯಲ್ಲಿ 5 ಕೋಟಿ ಹಣ ಎರಡು ತಿಂಗಳಿಂದ ಇದೆ ಎಂದು ಮುಖ್ಯಮಂತ್ರಿಗೆ ತಿಳಿಸಿದ್ದೆ.ಅದನ್ನು ವಾಪಸ್ ಕೊಡು ಎಂದು ಸಿಎಂ ಕೇಳಿದ್ರು ವಾಪಸ್ ಕೊಟ್ಟೆ ಎಂದು ಹೇಳಿದ್ದರು.ಈ ಹೇಳಿಕೆ ಆಧಾರದ ಮೇಲೆ ಟಿ.ಜೆ. ಅಬ್ರಾಹಂ ಹಾಗೂ ರವಿಕೃಷ್ಣಾರೆಡ್ಡಿ ಎಸಿಬಿಗೆ ದೂರು ನೀಡಿದ್ದರು.

        ದೂರಿನ ಆಧಾರದ ಮೇಲೆ ಎಸಿಬಿ ಪೋಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಮಾಡಿದ್ದರು.ಒಮ್ಮೆ ಹಾಜರಾಗಿ ಕಾಲಾವ ಕಾಶ ಕೇಳಿದ್ದ ಶಾಸಕ ಇದೀಗ ಎಸಿಬಿ ತನಿಖೆಗೆ ಹಾಜರಾಗದೆ ಕಣ್ಣಮುಚ್ಚಾಲೆ ಆಡುತ್ತಿದ್ದಾರೆ.ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ಅಧಿಕಾರಿಗಳು ಮತ್ತೆ ನೋಟಿಸ್ ನೀಡಿದ್ದಾರೆ. ಇಂದು ಹಾಜರಾಗದೇ ಇದ್ದರೆ ಶಾಸಕ ಶ್ರೀನಿವಾಸಗೌಡ ಅವರಿಗೆ ಜೈಲು ಗ್ಯಾರಂಟಿ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.ಇವತ್ತು ವಿಚಾರಣೆಗೆ ಹಾಜರಾಗುವಂತೆ 3ನೇ ನೋಟಿಸ್ ನೀಡಿದ್ದು, 3 ನೋಟಿಸ್‍ಗೂ ಹಾಜರಾಗದೇ ಹೋದರೆ ಶನಿವಾರ ಅಥವಾ ಸೋಮವಾರ ಎಫ್‍ಐಆರ್ ಹಾಕುವ ಪ್ಲಾನ್‍ನಲ್ಲಿ ಎಸಿಬಿ ಅಧಿಕಾರಿಗಳು ಇದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link