ಮಾರುತಿ ಮಾನ್ಪಡೆ ಸಾವಿಗೆ ರೈತ ವಿರೋಧಿ ಕಾಯಿದೆಗಳೆ ಕಾರಣ: ಸಿದ್ದರಾಮಯ್ಯ

ಬೆಂಗಳೂರು

     ರೈತ ಮುಖಂಡ ಮಾರುತಿ ಮಾನ್ಪಡೆ ಸಾವಿಗೆ ಬಿಜೆಪಿ ಸರ್ಕಾರ ಹಾಗೂ ಸರ್ಕಾರ ಜಾರಿಗೆ ತಂದ ರೈತ ವಿರೋಧಿ ಕಾಯಿದೆಗಳೆ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

     ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮಾನ್ಪಡೆ ನಿಧನಕ್ಕೆ ಡಿ.ಕೆ ಶಿವಕುಮಾರ್ ಕಾರಣ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದು ಬಾಲಿಶ ಹೇಳಿಕೆ. ರೈತ ವಿರೋಧಿ ಕಾನೂನು ತಂದವರೇ ಬಿಜೆಪಿಗರು. ಯಡಿಯೂರಪ್ಪ, ಸದಾನಂದ ಗೌಡ, ಮೋದಿ ಇವರೇ ಮಾನ್ಪಡೆ ಸಾವಿಗೆ ಕಾರಣ. ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯಿದೆ ತಂದು ಮುಖಂಡರು ಬೀದಿಗೆ ಇಳಿಯುವಂತೆ ಆಯಿತು.

    ಮಾನ್ಪಡೆ ಸಾವಿಗೆ ಬಿಜೆಪಿ ಕೇಂದ್ರ ಸರ್ಕಾರವೇ ನೇರ ಕಾರಣ. ಕಾಂಗ್ರೆಸ್ ನಾಯಕರು ಕಾರಣ ಎನ್ನುವುದು ಬಿಜೆಪಿಗರ ಬಾಲಿಶ ಹೇಳಿಕೆ. ಶಿರಾದಲ್ಲಿ ಬಿಜೆಪಿ ಹಣ ಹಂಚಿಕೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಕೆ.ಆರ್ ಪೇಟೆಯಲ್ಲೂ ದುಡ್ಡು ಹಂಚಿ ಗೆದ್ದರು.ಆರ್.ಆರ್ ನಗರ ಮತ್ತು ಶಿರಾದಲ್ಲಿ ಮತದಾರರು ಇವರಿಗೆ ಬುದ್ಧಿ ಕಲಿಸುತ್ತಾರೆ. ಹಣದ ಆಮಿಷಕ್ಕೆ ಜನರು ಒಳಗಾಗುವುದಿಲ್ಲ ಎಂದರು.

    ಈ ಹಿಂದೆ ಯಡಿಯೂರಪ್ಪ ಚೆಕ್ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದರು. ಈಗ ಆರ್.ಟಿ.ಜಿ.ಎಸ್ ಮೂಲಕ ಲಂಚ ತೆಗದುಕೊಳ್ಳುತ್ತಿದ್ದಾರೆ . ಲಂಚ ತೆಗದುಕೊಳ್ಳುವುದರಲ್ಲಿ ಯಡಿಯೂರಪ್ಪ ಅಪ್ಡೇಟ್ ಆಗಿದ್ದಾರೆ. ನೇರವಾಗಿ ಆರ್‍ಟಿಜಿಎಸ್ ಮುಖಾಂತರ ಖಾತೆಗೆ ಬೇಗ ಹಣ ವರ್ಗಾವಣೆಯಾಗುತ್ತದೆ ಎಂದು ಅಪ್ಡೇಟ್ ಆಗಿದ್ದಾರೆ ಎಂದು ಸಿದ್ದರಾಮಯ್ಯ ಕುಟುಕಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap