ದಾವಣಗೆರೆ:
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ.
ಇಂದು ಮದ್ಯಾಹ್ನ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಿ.ಕೆ.ಈರಣ್ಣ ಅಧ್ಯಕ್ಷರಾಗಿ ಮತ್ತು ಎಸ್.ಕೆ.ಚಂದ್ರಶೇಖರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಬಿ.ಕೆ.ಈರಣ್ಣ ಅಧ್ಯಕ್ಷರಾಗಿ ಮತ್ತು ಎಸ್.ಕೆ.ಚಂದ್ರಶೇಖರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿಗಳಾದ ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ಘೋಷಿಸಿದರು.
ಶಾಸಕರಾದ ಡಾ||ಶಾಮನೂರು ಶಿವಶಂಕರಪ್ಪನವರು ಮತ್ತು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ ಈ ಆಯ್ಕೆ ನಡೆಯಿತು.
ಈ ವೇಳೆ ನಿರ್ದೇಶಕರುಗಳಾದ ಶಾಮನೂರು ಕಲ್ಲೇಶಪ್ಪ, ಮುದೇಗೌಡ್ರು ಗಿರೀಶ್, ಎಂ.ಬಿ.ಹಾಲಪ್ಪ, ದೊಗ್ಗಳ್ಳಿ ಬಸವರಾಜ, ಟಿ.ರಾಜಣ್ಣ, ಎಂ.ಕೆ.ರೇವಣಸಿದ್ದಪ್ಪ, ಕೆ.ಜಿ. ಶಾಂತರಾಜ್, ಎಸ್.ಕೆ.ಚಂದ್ರಶೇಖರ್ , ಕೆ.ಎಚ್.ರೇವಣಸಿದ್ದಪ್ಪ , ಕೆ.ಪಿ.ಮಲ್ಲಿಕಾರ್ಜುನ್ ,ಸುಧಾ ರುದ್ರೇಶ್, ಮಂಜುನಾಥ್ ಶ್ಯಾಗಲೆ, ಶ್ರೀಮತಿ ಪಾಲಾಕ್ಷಮ್ಮ, ಸೇವ್ಯಾನಾಯ್ಕ, ಮುಖಂಡರುಗಳಾದ ಬೇತೂರು ಕರಿಬಸಪ್ಪ, ಡಾ|| ಹೆಚ್.ಬಿ.ಅರವಿಂದ್, ಕಾರ್ಯದರ್ಶಿ ಬಿ.ಆನಂದ್, ಸಹಾಯಕ ಕಾರ್ಯದರ್ಶಿ ಜಿ.ಪ್ರಭು, ರಾಜೇಶ್ ಕುಮಾರ್ , ನಾಗಲಿಂಗೇಶ್, ನೇರ್ಲಿಗೆ ಸಂಗಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತ್, ಆಲೂರು ಶಿವಕುಮಾರ್, ಆಲೂರು ವೀರಭದ್ರಪ್ಪ, ಆಲೂರು ಸೋಮಣ್ಣ ಸೇರಿದಂತೆ ಹಲವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
