ಹುಳಿಯಾರು
ಹುಳಿಯಾರು ಪಟ್ಟಣದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಶುದ್ಧ ನೀರಿನ ಘಟಕಕ್ಕೆ ನೀರಿನ ವ್ಯವಸ್ಥೆ ಮಾಡಿ ರೈತರು ಮತ್ತು ಇಲ್ಲಿನ ನಿವಾಸಿಗಳು ಶುದ್ಧ ನೀರು ಕುಡಿಯುವಂತೆ ಮಾಡಿ ಎಂದು ಸಾಮಾಜಿಕ ಕಾರ್ಯಕರ್ತ ಇಮ್ರಾಜ್ ಮನವಿ ಮಾಡಿದ್ದಾರೆ.
ಹುಳಿಯಾರು ಎಪಿಎಂಸಿ ಮಾರ್ಕೆಟ್ ವತಿಯಿಂದ ಮಾರುಕಟ್ಟೆಯಲ್ಲಿ ರೈತರಿಗೆ ಮತ್ತು ಗ್ರಾಹಕರಿಗೆ ಹಾಗೂ ವರ್ತಕರಿಗೆ ನೀರಿನ ದಾಹ ತೀರಿಸಲು ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿತ್ತು ಇದು ಸ್ವಲ್ಪ ದಿನ ಮಾತ್ರ ನಡೆಯಿತು. ತದ ನಂತರ ಕಾಲ ಕ್ರಮೇಣ ಅದು ನಿಂತು ಹೋಗಿದೆ.
ಇದರ ಜೊತೆಯಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಹುಳಿಯಾರು ನಗರಕ್ಕೆ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಅನುದಾನ ಕೊಟ್ಟು ಕಾಮಗಾರಿಯೂ ಪೂರ್ಣವಾಗಿದೆ. ಆದರೆ ಎರಡು ವರ್ಷವಾದರೂ ಈ ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಗಳು ಧೂಳು ಹಿಡಿಯುತ್ತಿವೆ.ತಕ್ಷಣ ಹುಳಿಯಾರು ಪಟ್ಟಣ ಪಂಚಾಯಿತಿ ವತಿಯಿಂದ ಅಥವಾ ಎಪಿಎಂಸಿ ವತಿಯಿಂದ ನೀರಿನ ಪೈಪ್ ಲೈನ್ ಮಾಡಿ ಘಟಕಕ್ಕೆ ನೀರು ಒದಗಿಸಿ ಹುಳಿಯಾರು ನಗರಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಸದ್ಬಳಕೆ ಆಗುವಂತೆ ಮಾಡಬೇಕೆಂದು ಅವರು ತಿಳಿಸಿದ್ದಾರೆ.