ಬೆಂಗಳೂರು
ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ನಡೆದ ಬಂದ್ ಮುಷ್ಕರಗಳಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ)ಗೆ 20.12 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ.ಕೆಎಸ್ಆರ್ಟಿಸಿ 2016-17ರಲ್ಲಿ 2.99 ಕೋಟಿ, 2017-18 ರಲ್ಲಿ 3.97 ಕೋಟಿ, 2018-19 ರಲ್ಲಿ 13.16 ಕೋಟಿ ನಷ್ಟವನ್ನು ಸಾರಿಗೆ ಸಂಸ್ಥೆ ಅನುಭವಿಸಿದೆ.
2016-17ರ ಸಾಲಿನಲ್ಲಿ 171 ವಾಹನಗಳಿಗೆ ಕಲ್ಲನ್ನು ಎಸೆದಿದ್ದರಿಂದ 171 ವಾಹನಗಳು ಜಖಂಗೊಂಡಿವೆ. 19,53, 612 ಲಕ್ಷ ಹಾನಿ ಉಂಟಾಗಿದೆ. 4 ಬಸ್ ಗಳನ್ನು ಪ್ರತಿಭಟನಾಕಾರರು ಸುಟ್ಟಿದ್ದರಿಂದ 37,50 ರೂ. ನಷ್ಟ ಉಂಟಾಗಿದೆ ಎಂದು ಪ್ರಕಟಣೆ ತಿಳಿಸಿದೆ. 2017-18ರ ಅವಧಿಯಲ್ಲಿ 16 ಬಸ್ ಗಳು ಜಖಂಗೊಂಡಿದ್ದು, 1,25,206 ರೂ. ನಷ್ಟ ಉಂಟಾಗಿದೆ. 2018-19ರ ಅವಧಿಯಲ್ಲಿ 34 ಬಸ್ ಗಳು ಜಖಂಗೊಂಡಿದ್ದು 5,40,556 ರೂ. ನಷ್ಟ ಉಂಟಾಗಿದ್ದರೆ ಏಪ್ರಿಲ್ 2019 ರಿಂದ ಇಂದಿನವರೆಗೆ ನಡೆದ ಸಾರ್ವಜನಿಕ ಪ್ರತಿಭಟನೆಯಿಂದಾಗಿ 23 ಬಸ್ ಗಳು ಹಾನಿಯಾಗಿದ್ದು 2,32,500 ರೂ. ನಷ್ಟ ಸಂಭವಿಸಿದೆ.
ಒಂದು ಬಸ್ಸನ್ನು ಸುಟ್ಟು ಹಾಕಲಾಗಿದ್ದು ಇದರಿಂದಾಗಿ 12 ಲಕ್ಷ ನಷ್ಟ ಅನುಭವಿಸಿದೆ. ಒಟ್ಟು 244 ವಾಹನಗಳು ಬಸ್ ಗಳು ಜಖಂಗೊಂಡಿದ್ದರಿಂದ ಸಾರಿಗೆ ಇಲಾಖೆ ಒಟ್ಟು 28,51,874 ಲಕ್ಷ ನಷ್ಟ ಅನುಭವಿಸಿವೆ. 5 ಬಸ್ ಗಳು ಸುಟ್ಟು ಹಾಕಿದ್ದರಿಂದ 49,50,000 ಲಕ್ಷ ನಷ್ಟ ಉಂಟಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
