ತುಮಕೂರು:
ನಗರದ ಪ್ರಾದೇಶಿಕ ವ್ಯವಸ್ಥಾಪಕರ ಕಛೇರಿ, ಎಸ್.ಬಿ.ಐ., ತುಮಕೂರು ಇದರ ಅವರಣದಲ್ಲಿ ಸಾಲ ಮೇಳವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವವಿದ್ಯಾಲಯದ ಹಣಕಾಸು ಅದಿಕಾರಿ ಡಾ. ಪರಮಶಿವಯ್ಯ ಜ್ಯೋತಿ ಬೆಳಗಿಸುವ ಮೂಲಕ ನೆರವೇರಿಸಿ ಮಾತನಾಡಿ ಎಸ್.ಬಿ.ಐ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮವಾದ ಗ್ರಾಹಕ ಸೇವೆಯನ್ನು ನೀಡುತ್ತಿದ್ದು, ಇಂತಹ ಸಾಲಮೇಳಗಳು ಸಾಮಾನ್ಯ ಜನರನ್ನು ತಲುಪಲು ನೆರವಾಗುತ್ತವೆ. ಈಗಿನ ಆಧುನಿಕ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಸೆಲ್ಫ್ ಬ್ಯಾಂಕಿಂಗ್ ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಎಸ್.ಬಿ.ಐ. ಡೆಪ್ಯುಟಿ ಜನರಲ್ ಮ್ಯಾನೇಜರ್ ಸಂಜಯ್ ಮಾತನಾಡಿ ಗ್ರಾಹಕರು ಬ್ಯಾಂಕಿಂಗ್ ಸೌಲಭ್ಯವನ್ನು ಯೋನೋ ಆ್ಯಪ್ ಮೂಲಕ ಬಳಸಿ ಸಾಲ ಸೌಲಭ್ಯಗಳನ್ನು ಪ್ರಿ ಅಪ್ರೂವ್ಡ್ ಪರ್ಸನಲ್ ಲೋನ್, ಪ್ರೀ ಅಪ್ರೂವ್ಡ್ ಹೋಂ ಇನ್ಟಾ ಟಾಪ್ ಅಪ್ ಲೋನ್ಸ್ ಬಳಸುವಂತೆ ಮನವಿ ಮಾಡಿದರು. ಈ ಬ್ಯಾಂಕ್ನಲ್ಲಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು ಹಾಗೂ ಇನ್ನು ಮುಂದೆ ಎಟಿಎಂಗಳಲ್ಲಿ ಎಟಿಎಂ ಕಾರ್ಡ್ ಬಳಸದೆ ಕ್ಯಾಶ್ ಪಡೆಯಬಹುದು ಎಂದರು.
ರೀಜಿನಲ್ ಮ್ಯಾನೇಜರ್ಗಳಾಧ ಅಮೋದ್ ಜಹಗೀರ್ಧಾರ್ ಸ್ವಾಗತಿಸಿದರು. ರುದ್ರೇಶ್ ಪ್ರಾರ್ಥಿಸಿದರು. ಸ್ವರ್ಣಗೃಹ, ರವೀನಾ, ವರಹ, ಅಸ್ಸತ್ಜ್, ಶ್ರಾವಂತಿ ಗ್ರೂಪ್, ಕೋನೋರ್ ಡೆ, ಅರವಿಂದ್, ಪುರನ್ಕರ ಪ್ರೋವಿಡೆಂಟ್ ಹಾಗೂ ಡೀಲರ್ಸ್ಗಳಾದ ಹ್ಯುಂಡೈ, ಮಾರುತಿ, ನೆಕ್ಸಾ, ಟಯೋಟ, ರೆನಾಲ್ಟ್, ಫೋರ್ಡ್, ಮಹೀಂದ್ರ, ಟಾಟಾ ವಿವಿಧ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿದ್ದವು. ಸ್ಥಳದಲ್ಲಿಯೇ ಬ್ಯಾಂಕಿನ ಗ್ರಾಹಕರಿಗೆ ಗೃಹಸಾಲ 4.37 ಕೋಟಿ, ವಿದ್ಯಾಭ್ಯಾಸ ಸಾಲ 1.51 ಕೋಟಿ ಹಾಗೂ ವಾಹನ ಸಾಲ 22 ಲಕ್ಷ ನೀಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
