ಆರಕ್ಷಕರ ಗೋಳನ್ನು ಕೇಳುವವರ್ಯಾರು?

ತಿಪಟೂರು :

      ನಗರದಲ್ಲಿ ಮುಂದುವರೆದಿರುವ ಯು.ಜಿ.ಡಿ. ಕಾಮಗಾರಿ ಅದ್ವಾನದಿಂದ ಪೋಲೀಸ್ ವಸತಿ ನಿಲಯದ ವ್ಯಾಪ್ತಿಯ ನಾಗರೀಕರು ಮತ್ತು ಪೋಲೀಸ್ ಸಿಬ್ಬಂದಿ ನೀರಿಲ್ಲದೇ ಪರಿತಪಿಸಬೇಕಾಗಿದೆ.ಇತ್ತೀಚೆಗೆ ಇಲ್ಲಿ ನಡೆದ ಯು.ಜಿ.ಡಿ. ಕಾಮಗಾರಿಯ ವೇಳೆ ರಸ್ತೆಯ ಗುಂಡಿಯನ್ನು ಬಿಗಿಯಾಗಿ ಮುಚ್ಚದೇ, ಕಾಟಾಚಾರಕ್ಕೆ ಗುಂಡಿ ಮುಚ್ಚಿ ಹೋಗಿರುವ ಗುತ್ತಿಗೆದಾರ ಹಣದಾಸೆಯ ಪರಿಣಾಮ ರಸ್ತೆ ಮಧ್ಯೆ ಆಳವಾದ ಕಂದಕ ಸೃಷ್ಟಿಯಾಗಿದೆ.

     ಇದರಿಂದಾಗಿ ಶಾಲಾ ವಾಹನಗಳು, ನೀರು ಪೂರೈಸುವ ಟ್ಯಾಕ್ಟರ್‍ಗಳು ಈ ಪ್ರದೇಶದಲ್ಲಿ ಸಂಚರಿಸಲು ನಿಷೇದಿಸಿದಂತಾಗಿ 144 ಸಕ್ಷೆನ್ ಜಾರಿಯಾದಂತಿದ್ದು ಓಡಾಡಲು ಹರಸಾಹಸ ಪಡುವಂತಾಗಿದ್ದು ದಿನದ 24 ಗಂಟೆಯು ಸಾರ್ವಜನಿಕರಿಗೆ ಸೇವೆಸಲ್ಲಿಸುವ ನಮಗೆ ಈ ಗತಿಯಾದರೆ ಮಿಕ್ಕವರ ಪಾಡೇನು ಎಂ ಸ್ಥಿತಿಯಲ್ಲಿ ಆರಕ್ಷಕರಿದ್ದಾರೆ. ಆದ್ದರಿಂದ ಸಂಬಂದಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link