ತಿಪಟೂರು :
ನಿರಂತರ ಸಮಾಜಸೇವೆ ಹಾಗೂ ನ್ಯಾಯದಾನದಲ್ಲಿ ತೊಡಗುವ ವಕೀಲರು ಕೆಲಸದ ಒತ್ತಡದಿಂದಾಗಿ ತಮ್ಮ ಆರೋಗ್ಯಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹಿರಯ ಶ್ರೇಣಿ ಜೆ.ಎಂ..ಎಫ್.ಸಿ ನ್ಯಾಯಧೀಶ ಸತೀಶ್ ತಿಳಿಸಿದರು.ನಗರದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘ ಹಾಗೂ ವಕೀಲರ ಪರಿಷತ್ ಬೆಂಗಳೂರು, ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತ ಕೇಂದ್ರ ಮತ್ತು ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ ಇವರ ಸಹಯೋಗದಲ್ಲಿ ವಕೀಲರಿಗಾಗಿ ಆಯೋಜಿಸಿದ್ದ ಆರೋಗ್ಯ ಶಿಭಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ವಕೀಲರು ಕಾರ್ಯದ ಒತ್ತಡದಿಂದ ಅನೇಕರ ರೋಗಗಳಿಗೆ ತುತ್ತಾಗುತ್ತಿದ್ದು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
ಅವರು ಸಂಪಾದನೆಯ ಜೊತೆಗೆ ತಮ್ಮ ಆರೋಗ್ಯದ ರಕ್ಷಣೆಗೆ ಹೆಚ್ಚುಗಮನ ಕೊಡಬೇಕು ವಕೀಲರು ಆರೂಗ್ಯವಾಗಿದ್ದರೆ ಸಮಾಜಕ್ಕೆ ಉತ್ತಮವಾದ ಸೇವೆ ಸಲ್ಲಿಸುವುದು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಿಪಟೂರು ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಲಕ್ಷ್ಮಣ್ ಮಾತನಾಡಿ ಘಟ ಇದ್ದರೆ ಮಠಕಟ್ಟಬಹುದು ಆದ್ದರಿಂದ ನಾವು ಆರೋಗ್ಯವಾಗಿದ್ದರೆ ಸ್ವಸ್ಥಸಮಾಜವನ್ನು ನಿರ್ಮಿಸಬಹುದು ಆದ್ದರಿಂದ ಎಲ್ಲರೀಗೂ ಆರೋಗ್ಯ ಮುಖ್ಯವಾಗಿದ್ದು ಅದಕ್ಕಾಗಿ ಆರೋಗ್ಯವನ್ನು ಕಾಪಾಡಿ ಕೊಳ್ಳುವುದಕ್ಕೋಸ್ಕರ ಈ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಿದರು. ದಿನಾಂಕ : 03-04 2019ರ ಬುಧವಾರ ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಿಂದ ಹಿಂದೂ ವಾರಸುದಾರಿಕೆ ಕಾನೂನು ಅರಿವು ಕಾರ್ಯಕ್ರಮವಿದ್ದು ಕಾನೂನು ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಚರ್ಚಿಸಿಕೊಳ್ಳಬಹುದೆಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
