ಮಾಜಿ ಸಿಎಂಗೆ ಟಾಂಗ್ ಕೊಟ್ಟ ಡಿಸಿಎಂ..!

ಮಾಗಡಿ

    ರಾಮನಗರಕ್ಕೂ ನನಗೂ ಭಾವನಾತ್ಮಕ ಸಂಬಂಧವಿದೆ. ನಾನು ಹೊರಗಿನಿಂದ ಬಂದವನಲ್ಲ. ರಾಜಕೀಯವಾಗಿ ಜಿಲ್ಲೆಯ ಜನನರ ಭಾವನೆಯನ್ನು ಬಳಕೆ ಮಾಡಿಕೊಳ್ಳಲು ಬಂದವನಲ್ಲ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ.

    ಮಾಗಡಿ ತಾಲ್ಲೂಕಿನ ಕೆಂಪಾಪುರ ಗ್ರಾಮದಲ್ಲಿ ಮಾತನಾಡಿದ ಡಿಸಿಎಂ ಅಶ್ವಥನಾರಾಯಣ್ ಅವರು ಎಚ್. ಡಿ. ಕುಮಾರ ಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ. ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರವಾದ ವಿಚಾರದ ಬಗ್ಗೆ ಮಾತನಾಡಿದ  ಅವರು ಯಾರು ಏನೇನು ಮಾಡಿದ್ದಾರೆ ಎಂಬುದು ನಮಗೆ ಅರಿವಿದೆ ಮತ್ತೆ ನಮಗೆ ಅಧಿಕಾರ ಇದೆ ಅಂತ ಏನೇನೋ ಮಾಡುವುದಕ್ಕೆ ಆಗಲ್ಲ. ಶಕ್ತಿ ಇದೆ ಅಂತ ಎಲ್ಲವನ್ನೂ ನಮ್ಮ ಮನೆಗೆ ಎತ್ತಿಕೊಂಡು ಹೋಗೋಕೆ ಅಗುತ್ತೇನ್ರಿ? ಅಧಿಕಾರ ಯಾವುತ್ತೂ ಬಳಕೆಯಾಗಬೇಕು, ದುರ್ಬಳಕೆ ಆಗಬಾರದು. ರಾಮನಗರದಲ್ಲಿ ಅವರು ಏನು ಮಾಡಿಲ್ಲ, ಅದನ್ನು ನಾವು ಮಾಡಿ ತೋರಿಸ್ತೀನಿ ಎಂದು ಹೇಳಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap