ಚೇಳೂರು: ರಸ್ತೆ ಅಪಘಾತದಲ್ಲಿ ಎ ಎಸ್ ಐ ಸಾವು ..!

ಚೇಳೂರು:

ಚೇಳೂರು : ಬೈಕ್ ಗೆ ಲಾರಿ ಡಿಕ್ಕಿ: ಎ ಎಸ್ ಐ ಗೆ ಕಾಲು ಮುರಿತ

  ಚೇಳೂರು ಪೊಲೀಸ್‍ಠಾಣೆಯಲ್ಲಿಕರ್ತವ್ಯ ನಿರ್ವಹಿಸುತ್ತಿರುವಎಎಸ್‍ಐ ಭುವನೇಶ್ವರ್[59] ಅಪಘಾತದಲ್ಲಿ ಮೃತ ಪಟ್ಟಿರುವ ಘಟನೆ ಠಾಣೆ ವ್ಯಾಪ್ತಿಯ ಹುದ್ದೆಹೊಸಕರೆ ಬಳಿ ನೆಡೆದಿದೆ.

  ಮೃತರು ಇಂದು ಬೆಳಿಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಕೊಡಿನಾಗೇನಹಳ್ಳಿಗೆ ಹೋಗಿ ಕರ್ತವ್ಯ ನಿರ್ವಹಿಸಿಕೊಂಡು ಬೈಕ್‍ನಲ್ಲಿ ಬರುವಾಗ ಶಿರಾ ಕಡೆಯಿಂದ ಅಲೂಗಡ್ಡೆ ತುಂಬಿಕೊಂಡು ಬರುತ್ತಿದ್ದ ಹರಿಯಾಣ ರಾಜ್ಯದ ಲಾರಿ ಡಿಕ್ಕಿ ಹೊಡೆದು ಎಎಸ್‍ಐ ರವರಿಗೆ ಕಾಲು . ಕೈಗಳಿಗೆ ಪೆಟ್ಟು ಬಿದ್ದ ಮಾಹಿತಿ ತಿಳಿದ ತಕ್ಷಣ ಚೇಳೂರು ಠಾಣೆ ಪಿಎಸ್‍ಐ ವಿಜಯಕುಮಾರ್ ಹಾಗೂ ಸಿಬ್ಬಂದಿಗಳು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು.

     ಆದರೆ ಚಿಕಿತ್ಸೆ ಫಲಕಾರಿಯಾಗದೆ ಮದ್ಯಾಹ್ನ 2 ಗಂಟೆ ಸಮಯದಲ್ಲಿ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತ ಮಾಡಿದ ಲಾರಿಯನ್ನು ಪೊಲೀಸ್‍ರು ಕೆ.ಬಿ.ಕ್ರಾಸ್ ಬಳಿ ವಶ ಪಡಿಸಿಕೊಂಡಿದ್ದಾರೆ .ಆದರೆ ಚಾಲಕ ಪರಾರಿಯಾಗಿದ್ದಾನೆ. ಮೃತರು ಚೇಳೂರು ಠಾಣೆಯಲ್ಲಿ ಸುಮಾರು 4 ವರ್ಷದಿಂದ ಎಎಸ್‍ಐಯಾಗಿ ಕರ್ತವ್ಯ ನಿರ್ವಹಿಸುತ್ತಿದರು. ಇವರಿಗೆ ಪತ್ನಿ ಇಬ್ಬರು ಗಂಡು ಮಕ್ಕಳು ಇದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap