ಔರಾದ್ಕರ್ ವರದಿ ಜಾರಿಗೆ ಪರಿಶೀಲನೆ : ಎಂ ಬಿ ಪಾಟೀಲ್

ಬೆಂಗಳೂರು

       ಪೊಲೀಸ್ ಕಾನ್ಸ್ ಸ್ಟೇಬಲ್ ಗಳ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸಬೇಕೆಂದು ಎಂದು ಅಖಿಲ ಕರ್ನಾಟಕ ಪೊಲೀಸ್ ಮಹಾ ಸಭಾದ ಅಧ್ಯಕ್ಷ ವಿ.ಶಶಿಧರ್ ಗೃಹ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

        ನಿನ್ನೆ ಗೃಹಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ,ಹಿರಿಯ ಐಪಿಎಸ್ ಅಧಿಕಾರಿ ಔರಾದ್ಕರ್ ವರದಿ ಜಾರಿಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು .ಈ ಹಿನ್ನಲೆಯಲ್ಲಿ ಸಚಿವರ ಹೇಳಿಕೆಗೆ ಗಮನಿಸಿ ಪತ್ರ ಬರೆದಿರುವ ವಿ.ಶಶಿಧರ್, 2016ರಲ್ಲಿ ಅಂದಿನ ಸರ್ಕಾರ ಪೊಲೀಸರ ಹೋರಾಟ ತಡೆಯುವ ಹುನ್ನಾರ ನಡೆಸಿತು.

          ಔರಾದ್ಕರ್ ನೇತೃತ್ವದ ಸಮಿತಿ ರಚಿಸಿ ವರದಿ ಪಡೆದುಕೊಂಡಿದ್ದರು ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗಲಾದರು ತಾವು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕೆಂದು ಎಂದು ಗೃಹ ಸಚಿವ ಎಂ.ಬಿ.ಪಾಟೀಲರಿಗೆ ಪತ್ರದಲ್ಲಿ ವಿ.ಶೆಶಿಧರ್ ಒತ್ತಾಯ ಮಾಡಿದ್ದಾರೆ..

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap