ಚಿರತೆ ದಾಳಿ : ಮತ್ತೊಂದು ಮಗು ಬಲಿ

ತುಮಕೂರು

    ತಾಲ್ಲೂಕಿನಲ್ಲಿ ಚಿರತೆ ಹಾವಳಿ ಇನ್ನೂ ಮುಂದುವರೆದಿದ್ದು ಶನಿವಾರ ಹೆಬ್ಬೂರು ಹೋಬಳಿಯಲ್ಲಿ ಮತ್ತೊಂದು ಮಗು ಬಲಿಯಾಗಿದೆ. ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಯ ಕಣಕುಪ್ಪೆ ಪಂಚಾಯಿತಿ ಬೈಚೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಚಿಕ್ಕಣ್ಣ ಅವರ ಮೊಮ್ಮಗ ಮನೆ ಮುಂದೆ ಆಟ ಆಡುವಾಗ ಚಿರತೆ ದಾಳಿ ಮಾಡಿದೆ.

    ಶನಿವಾರ ಸಂಜೆ 6 ಗಂಟೆಗೆ ಮತ್ತೆ ಚಿರತೆ ದಾಳಿ ನಡೆಸಿದ್ದ 3 ವರ್ಷದ ಮಗು ಬಲಿಯಾಗಿದೆ. ಈಚೆಗಷ್ಟೇ ಇಲ್ಲಿಯೇ ಸಮೀಪ ಐದು ವರ್ಷದ ಮಗವನ್ನು ಚಿರತೆ ಕೊಂದಿತ್ತು. ಬೈಚೇನಹಳ್ಳಿ ಗ್ರಾಪಂ ಸದಸ್ಯ ಗಂಗಚಿಕ್ಕಣ್ಣ ಅವರ ಮೊಮ್ಮಗು ಚಂದನ್ ಮನೆಯ ಮುಂದೆ ಆಟವಾಡುತ್ತಿದ್ದಳು. ಈ ಸಮಯದಲ್ಲಿ ರಾತ್ರಿ 8 ಗಂಟೆ ವೇಳೆಗೆ ಚಿರತೆ ದಾಳಿ ನಡೆಸಿದ್ದು, ಮಗುವನ್ನು ಹೊತ್ತೊಯ್ದಿದೆ.

    ಮಗುವಿನ ತಂದೆ ತಾಯಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಮಗು ಅಜ್ಜನೊಂದಿಗೆ ಬೈಚೇನಹಳ್ಳಿಯಲ್ಲಿತ್ತು. ಮಗುವಿನ ತಂದೆ ಶಂಕರ್ ದಂಪತಿ ಶನಿವಾರವಷ್ಟೇ ಮಗುವನ್ನು ನೋಡಲು ಬೆಂಗಳೂರಿನಿಂದ ಬಂದಿದ್ದರು ಎನ್ನಲಾಗಿದೆ. ಘಟನೆ ಬಳಿಕ ಅರಣ್ಯ ಹಾಗೂ ಪೆÇಲೀಸ್ ಅಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಮಗುವಿನ ಶವ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಮನೆಯ ಸಮೀಪದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ.

ಪ್ರತಿಭಟನೆ:

    ಚಿರತೆ ದಾಳಿಗೆ ಮಗು ಬಲಿಯಾದ ಹಿನ್ನೆಲೆಯಲ್ಲಿ ಹೆಬ್ಬೂರಿನಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ. ಇದೇ ಭಾಗದಲ್ಲಿ ಚಿರತೆ ಹಾವಳಿಯಿಂದ ಹಲವರು ಬಲಿಯಾಗಿದ್ದು, ರುಚಿ ಕಂಡುಕೊಂಡಿರುವ ಚಿರತೆ ಮಕ್ಕಳ ಮೇಲೆ, ನಾಯಿಗಳ ಮೇಲೆ, ಸಾಕು ಪ್ರಾಣಿಗಳ ಮೇಲೆ ದಾಳಿ ಮುಂದುವರೆಸಿದ್ದು, ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap