ಬನ್ನಿ ಮುಡಿಯುವ ಸ್ಥಳ ನವೀಕರಣ

ಹರಿಹರ :

       ನಗರದ ಜೋಡಿ ನಂದೀಶ್ವರ ದೇವಸ್ಥಾನದ ಬಳಿ ಬನ್ನಿ ಮುಡಿಯುವ ಸ್ಥಳ ನವೀಕರಣ ಮಾಡುವುದಾಗಿ ಶಾಸಕ ಎಸ್.ರಾಮಪ್ಪ ಭರವಸೆ ನೀಡಿದರು. 

       ನಗರದ ಶ್ರೀ ರೇಣುಕಾ ಮಂದಿರದಲ್ಲಿ ದಸರಾ ಮಹೋತ್ಸವದ ಸಮಿತಿಯ ಆಶ್ರಯದಲ್ಲಿ ನಡೆದ ಪೂರ್ವ ಬಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅತೀ ಶೀಘ್ರದಲ್ಲಿಯೇ ಬನ್ನಿಮುಡಿಯುವ ಸ್ಥಳವನ್ನು ಶಾಶ್ವತವಾಗಿ ನವೀಕರಿಸುವುದಾಗಿ ಈಗಾಗಲೇ ತಹಶೀಲ್ದಾರ್ ಸೂಚಿಸಿದೆನೆ ಎಂದರು.

       ಈಗಾಗಲೇ ಓಂಕಾರ ಮಠದ ಹಿಂಭಾಗದಲ್ಲಿ 2ಕೋಟಿ ರೂ.ವೆಚ್ಚದಲ್ಲಿ ಪಾರ್ಕ್ ಮತ್ತು ಕಾರಂಜಿಯನ್ನು ಮಾಡುವುದಾಗಿ ತಿಳಿಸಿದರು. ಇದರಿಂದ ಯಾತ್ರಾ ನಿವಾಸಿಗಳು ಇಲ್ಲಿ ಬಂದು ಕುಳಿತು ಕೊಂಡು ಊಟವನ್ನು ಮಾಡಿ, ವಿಶ್ರಾಂತಿ ಪಡೆಯಬಹುದಾಗಿದೆ ಎಂದು ಹೇಳಿದರು.
ಪ್ರತಿವರ್ಷ ದಸರಾ ಮಹೋತ್ಸವದ ಕಾರ್ಯಕ್ರಮಕ್ಕೆ ಮಹಿಳೆಯರಿಂದ ಮೆರಗು ಬರುತ್ತಿದ್ದು ಈ ಮಹೋತ್ಸವವು ಯಶಸ್ವಿಯಾಗಲು ಒಬ್ಬರಿಂದ ಮಾತ್ರ ಸಾಧ್ಯವಾಗುವುದಿಲ್ಲ.

        ನಿವೆಲ್ಲರೂ ಸಹಕಾರ ನೀಡಿದಾಗ ಮಾತ್ರ ಈ ಮಹೋತ್ಸವವು ಯಶಸ್ವಿಯಾಗಲು ಕಾರಣವಾಗುತ್ತದೆ. ಈ ದಸರಾ ಮಹೋತ್ಸವವು ಆನಾಧಿ ಕಾಲದಿಂದ ನಡೆದು ಬಂದಂತಹ ಮಹೋತ್ಸವವಾಗಿದೆ. ಎಲ್ಲರೂ ಸೇರಿಕೊಂಡು ಪ್ರೀತಿ-ವಿಶ್ವಾಸದಿಂದ ಈ ನಾಡಹಬ್ಬವನ್ನು ಆಚರಿಸೋಣ ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

        ದಸರಾ ಮಹೋತ್ಸವದ ಸಮಿತಿಯ ಅಧ್ಯಕ್ಷರಾದ ಶಂಕರ್ ಕಟಾವಕರ್ ಮಾತನಾಡಿ ದಸರಾ ಮಹೋತ್ಸವವು ಬಹವಿಜೃಂಭಣೆಯಿಂದ ನಡೆಯಲು ನಿವೆಲ್ಲರೂ ಕಾರಣಿಭೂತರುಗಿದ್ದು ಈ ಮಹೋತ್ಸವವು ಯಾವುದೇ ಜಾತಿ-ಮತ-ಬೇದ-ಭಾವವಿಲ್ಲದೆ, ಭಾವೈಕ್ಯೆತೆಯಿಂದ ಕೂಡಿರುವ ದಸರಾ ಮಹೋತ್ಸವವಾಗಿದೆ. ಬನ್ನಿ ಮಂಟಪವು ಸುಂದರವಾದ ಕಾಂಪೌಂಡ್ ನಿರ್ಮಾಣಕ್ಕೆ ಈಗಾಗಲೇ ಶಾಸಕರು ತಹಶೀಲ್ದಾ ರ್ ರವರಿಗೆ ಸೂಚನೆ ನೀಡಿದ್ದಾರೆ ಎಂದರು.

        9ದಿನಗಳ ಕಾಲ ಸಾಂಸ್ಕøತಿಕ, ಧಾರ್ಮಿಕ ಹಾಗೂ ಸೌಂದರ್ಯ ಲಹರಿಯ ಭಜನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ದಸರಾ ಮಹೋತ್ಸವವನ್ನು ಬಹುವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ. ದಸರಾ ಉತ್ಸವವು ಕೊನೆಯ ದಿನದ ಮಹೋತ್ಸವವನ್ನು ವೀಕ್ಷಿಸಲು ಹಳ್ಳಿ-ಹಳ್ಳಿಯಿಂದ ಬರುತ್ತಿರುವುದು ಹೆಮ್ಮೆಯ ವಿಷಯ. ಜಂಬು ಸಾವರಿಗೆ ಈ ಬಾರಿ ಉಜ್ಜಯಿನಿ ಪೀಠದಿಂದ ಶ್ರೀಗಳು ಮತ್ತು ಆನೆ ಅಂಬಾರಿಯನ್ನು ಕರೆ ತರಲು ಸಿದ್ಧತೆ ನಡೆಸಲಾಗಿದೆಎಂದರು.

         ರಾಜ್ಯಾದ್ಯಂತ ಕಲಾವಿದರ ತಂಡಗಳನ್ನು ಕರೆಸುವ ನಮ್ಮ ಬಳಗವು ಪ್ರಯತ್ನದಲ್ಲಿ ಇದ್ದಾರೆ. ಎಲ್ಲಾ ಧರ್ಮಿಯ ಜನಾಂಗದವರು ಸೇರಿ ಭಾವೈಕ್ಯೆತೆಗೆ ಮೆರಗು ಕೊಟ್ಟು ಒಟ್ಟಾಗಿ ಸೇರಿ ಹಬ್ಬವನ್ನು ಮಾಡುವ ನಿಟ್ಟಿನಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಹೇಳಿದರು. ಮೆರವಣಿಗೆಯಲ್ಲಿ ಈ ಬಾರಿ 2 ಒಂಟೆಗಳು, ಅಶ್ವಮೇಧ ಕುದುರೆಗಳು ಹಾಗೂ ಇತರೆ ಜಾನಪದ ತಂಡಗಳು ಆಗಮಿಸಲಿವೆ ಎಂದು ಹೇಳಿದರು.

        ಈ ಸಂದರ್ಭದಲ್ಲಿ ಶಿವಪ್ರಕಾಶ್. ಸ್ವಾಗತವನ್ನು ಪ್ರಕಾಶ್ ಶೆಟ್ಟಿ, ನಿರೂಪಣೆಯನ್ನು ಅಜಿತ್ ಸಾವಂತ್ ನೆರವೇರಿಸಿಕೊಟ್ಟರು. 2017ನೇ ಸಾಲಿನ ದಸರಾ ಮಹೋತ್ಸವದ ಲೆಕ್ಕಪತ್ರವನ್ನು ಮಾಲತೇಶ್ ಬಂಡಾರಿಯವರು ಮಂಡಿಸಿದರು.

        ಸಭೆಯಲ್ಲಿ ಪೌರಾಯುಕ್ತೆ ಶ್ರೀಮತಿ ಎಸ್.ಲಕ್ಷ್ಮೀ, ತಹಶೀಲ್ದಾರ್ ರೆಹನ್ ಪಾಷಾ, ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಜಾತ, ನಗರಸಭೆ ಸದಸ್ಯರುಗಳಾದ ಬಿ.ರೇವಣಸಿದ್ದಪ್ಪ, ಕೆ.ಮರಿದೇವ್, ಏಜಾಜ್ ಅಹಮ್ಮದ್, ರೇಣುಕಾ ಮಂದಿರ ಸಮಿತಿಯ ಅಧ್ಯಕ್ಷ ಜುಂಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಗೌಡ್ರು ಮಹದೇವಪ್ಪ, ಶ್ರೀಮತಿ ನಾಗಮಣಿ ಶಾಸ್ತ್ರೀ, ರಾಘವೇಂದ್ರ ಮಠದ ಪ್ರಧಾನ ಅರ್ಚಕರಾದ ವರಹಾಚಾರ್, ನಾರಾಯಣ ಜೋಷಿ, ಕೆ.ಬೀರಪ್ಪ, ಶಾಮಣ್ಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link