ಬೆಂಗಳೂರು
ಗುರುವಾರ ತಡರಾತ್ರಿ ಸಿಸಿಬಿ, ಪೊಲೀಸರು ಕಾರ್ಯಾಚರಣೆ ನಡೆಸಿ ಕೆಜಿ, ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಕಲೀಂ ಪಾಷಾ ಸೇರಿ 50ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಕಲೀಂ ಪಾಷಾ, ಬಿಬಿಎಂಪಿ ಪಾಲಿಕೆ ಸದಸ್ಯೆ ಇರ್ಷಾದ್ ಬೇಗಂ ಅವರ ಪತಿ ಎಂದು ತಿಳಿದು ಬಂದಿದೆ.
ಬಂಧಿತ ಕಲೀಂ ಪಾಷಾ ಹಿಂಸಾಚಾರ, ಗಲಭೆಗೂ ಮುಂಚಿತವಾಗಿಯೇ ಕೆ ಜಿ ಹಳ್ಳಿ ಪೊಲೀಸ್ ಠಾಣೆ ಬಳಿ ಬಂದಿದ್ದರು. ನಂತರ ಗಲಭೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಪ್ರಚೋದಿಸಿ ಪರಾರಿಯಾಗಿದ್ದರು. ಮತ್ತೆ ಕೆಲ ಗಂಟೆಗಳ ಬಳಿಕ ಠಾಣೆ ಬಳಿ ವಾಪಸ್ಸಾಗಿದ್ದ ಅವರು ತಾನು ಪೊಲೀಸರ ಪರ ಎಂಬಂತೆ ನಾಟಕವಾಡಿದ್ದನು. ಹೀಗಾಗಿ ಕಲೀಂ ಪಾಷಾ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ರಾತ್ರಿ 12 ರಿಂದ ನಸುಕಿನ ಜಾವ 4 ಗಂಟೆವರೆಗೆ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ಡಿಸಿಪಿ ಕುಲದೀಪ್ ಕುಮಾರ್ ಜೈನ್, ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕೆಜಿ ಹಳ್ಳಿ, ಡಿಜೆ ಹಳ್ಳಿ ವ್ಯಾಪ್ತಿಯ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/bbmp.gif)