ಗುಬ್ಬಿ
ನಿಟ್ಟೂರು ಬೆಸ್ಕಾಂ ವ್ಯಾಪ್ತಿಗೆ ಬರುವ ಗೊಲ್ಲಹಳ್ಳಿ ಗ್ರಾಮದಲ್ಲಿ ಹಾಲಿನ ಶೀತಲಾಗಾರಕ್ಕೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಲು 10 ಸಾವಿರ ರೂ ಲಂಚವನ್ನು ಎರಡು ಕಂತಿನಲ್ಲಿ ನೀಡಲು ಬೇಡಿಕೆ ಇಟ್ಟಿದ್ದ ನಿಟ್ಟೂರು ಬೆಸ್ಕಾಂ ಎಇಇ ಮಾಯಕಣ್ಣ ನಾಯಕ್ಎರಡನೇ ಕಂತಿನಲ್ಲಿ 4 ಸಾವಿರ ರೂ ಲಂಚ ಸ್ವೀಕರಿಸುವ ವೇಳೆಯಲ್ಲಿ ಎಸಿಬಿ ಅಧಿಕಾರಿಗಳ ಕೈಗೆ ಸಾಕ್ಷ್ಯ ಸಹಿತ ಸಿಲುಕಿದ್ದಾರೆ.
ಎಸಿಬಿ ಡಿವೈಎಸ್ಪಿ ಉಮಾಶಂಕರ್ ಹಾಗೂ ಇನ್ಸಪೆಕ್ಟರ್ ರಮೇಶ್ ಬೆಸ್ಕಾಂ ಕಚೇರಿಯಲ್ಲೇ ತನಿಖೆ ನಡೆಸಿದ್ದಾರೆ.
ತೊಗರಿಘಟ್ಟದ ರೈತ ಬಿ.ಸಿದ್ದೇಶ್ವರ್ ಎಂಬ ರೈತನ ಬಳಿ ಶೀತಲಾಗಾರಕ್ಕೆ ವಿದ್ಯುತ್ ಸಂಪರ್ಕಕ್ಕೆ ಲಂಚ ಬೇಡಿಕೆ ಇಟ್ಟಿರುವ ಬಗ್ಗೆ ಎಸಿಬಿಗೆ ದೂರು ನೀಡಲಾಗಿತ್ತು. ಈಗಾಗಲೇ 4 ಸಾವಿರ ರೂ ಲಂಚ ನೀಡಲಾಗಿತ್ತು. ಉಳಿದ ಎರಡನೇ ಕಂತಿನಲ್ಲಿ 4 ಸಾವಿರ ರೂ ಲಂಚದ ಹಣವನ್ನು ಮದ್ಯಾಹ್ನ ವೇಳೆ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ತಂಡ ದಾಳಿ ನಡೆಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
