ವಿದ್ಯುತ್ ತಂತಿ ಬದಲಿಸಿದ ಬೆಸ್ಕಾಂ

ಹುಳಿಯಾರು

        ಕೃಷಿ ಪಂಪ್‍ಸೆಟ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹಾಕಿರುವ ವಿದ್ಯುತ್ ಕಂಬಗಳ ತಂತಿಗಳು ಇಳಿ ಬಿದ್ದಿದ್ದು, ರೈತರು ಆತಂಕದಿಂದ ಬೇಸಾಯ ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದು ಹುಳಿಯಾರು ಸಮೀಪದ ಹೊಸದುರ್ಗ ರಸ್ತೆಯ ಕೇಶವಾಪುರ ಬಳಿಯ ಕೃಷಿಕರಾದ ಎಲೆಬಳ್ಳಿಜಯಣ್ಣ ಮತ್ತು ಜಾಫರ್ ಅವರು ಇತ್ತೀಚೆಗೆ ದೂರಿದ್ದರು.

       ತಮ್ಮ ಜಮೀನುಗಳಲ್ಲಿ ವಿದ್ಯುತ್ ತಂತಿಗಳು ಜೋಲಾಡುತ್ತಿವೆ. ನೆಲಮಟ್ಟದಿಂದ ಕೇವಲ 7 ಅಡಿ ಅಂತರದಲ್ಲಿ ತೂಗಾಡುತ್ತಿವೆ. ರೈತರು ಜಮೀನು ಉಳುವಾಗ ಕೋಲು ಮೇಲೆತ್ತಿದರೂ ತಂತಿಗಳು ತಾಗುತ್ತವೆ. ತೆಂಗಿನ ಮರಗಳ ಮಧ್ಯೆ ವಿದ್ಯುತ್ ತಂತಿಗಳು ಜೋಲಾಡುತ್ತಿರುವುದರಿಂದ ರೈತರು ತಂತಿಗಳ ಕೆಳಗೆ ತಿರುಗಾಡಲು ಭಯಪಡುತ್ತಿದ್ದಾರೆ. ರಾತ್ರಿಯ ವೇಳೆ ನೀರು ಕಟ್ಟಲು ಬರುವ ರೈತರು ಆತಂಕ ವ್ಯಕ್ತಪಡಿಸಿದ್ದರು.

       ಈ ಬಗ್ಗೆ ಪತ್ರಿಕೆಯಲ್ಲಿ ಸುದ್ದಿಯಾಗಿದ್ದು ಬೆಸ್ಕಾಂ ಎಸ್‍ಈ ಉಮೇಶ್ ನಾಯ್ಕ ಅವರು ಸುದ್ದಿಯಾದ ಒಂದೇ ವಾರದಲ್ಲಿ ಹೊಸ ಕಂಬಗಳ ಸಹಿತ ಜೋತು ಬಿದ್ದ ತಂತಿಗಳನ್ನು ಬದಲಾಯಿಸಿ ಸಮಸ್ಯೆ ಪರಿಹರಿಸಿದ್ದಾರೆ. ಈ ಮೂಲಕ ಇಲ್ಲಿನ ರೈತರು ನೆಮ್ಮದಿಯ ಕೃಷಿ ಮಾಡಲು ನೆರವಾಗಿದ್ದಾರೆ.

      ಈ ಸಂಬಂಧ ಬೆಸ್ಕಾಂ ಎಸ್‍ಓ ಉಮೇಶ್ ನಾಯ್ಕ ಅವರು ಮಾತನಾಡಿ ತಾವು ಪತ್ರಿಕೆಯಲ್ಲಿ ವರದಿ ಮಾಡಿದಂತೆ ಕೇಶವಪುರ ಗ್ರಾಮದ ಐಪಿ ಪರಿವರ್ತಕದ ಎಲ್ಟಿ ಮಾರ್ಗದಲ್ಲಿ ವೈರಿಗಳು ಕೈಗೆಟುಕುವ ಹಾಗೆ ಇದ್ದವು. ಶಾಖಾಧಿಕಾರಿಯಾದ ನಾನು ಇದನ್ನು ಮೊದಲೇ ಗಮನಿಸಿ ಕಳೆದ ಸಾಲಿನಲ್ಲಿ ಮಧ್ಯಂತರ ಕಂಬಗಳನ್ನು ಹಾಗೂ ಮಾರ್ಗದ ಹಳೆಯ ವೈರುಗಳನ್ನು ಬದಲಾಯಿಸಲು ಅಂದಾಜು ತಯಾರಿಸಿದ್ದೆ ಅದಕ್ಕೆ ಕಾರ್ಯಾದೇಶ ಸಂಖ್ಯೆಯೂ ದೊರೆತು, ಕೆಲಸ ನಿರ್ವಹಿಸಲು ಅನುಮತಿ ದೊರೆತಿತ್ತು.

      ಆದರೆ ಗುತ್ತಿಗೆದಾರರು ಕೆಲಸ ಮಾಡಲು ತಡವಾಗಿದ್ದರಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿತ್ತು. ಪತ್ರಿಕೆಯಲ್ಲಿ ಸುದ್ದಿ ಬಂದ ತಕ್ಷಣ ಗುತ್ತಿಗೆದಾರರು ಆಗಮಿಸಿ ಕೆಲಸವನ್ನು ಸೂರ್ಣಗೊಳಿಸಿದ್ದಾರೆ. ಈಗ ಈ ಬಾಗದ ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆಗಳನ್ನು ಮಾಡಬಹುದಾಗಿದೆ ಎಂದು ವೈರ್ ಬದಲಾಯಿಸುವ ಕಾಮಗಾರಿಯ ವಿವಿಧ ಹಂತಗಳ ಪೋಟೋ ಸಹಿತ ವಿವರಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link