ಚಿಕ್ಕನಾಯಕನಹಳ್ಳಿ
ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರುವುದು ಹಾಗೂ ವಿತರಣ ಕಂಪನಿಗಳನ್ನು ಖಾಸಗಿಕರಣಗೊಳಿಸಲು ಹೊರಟಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ಆಗ್ರಹಿಸಿ ಪಟ್ಟಣದ ಬೆಸ್ಕಾಂ ಸಿಬ್ಬಂದಿ ಪ್ರತಿಭಟನೆ ನಡೆಸಿದರು.ಪಟ್ಟಣದ ಬೆಸ್ಕಾಂ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ ಬೆಸ್ಕಾಂ ನೌಕರರು ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.
ಬೆಸ್ಕಾಂ ಕಾರ್ಯ ನಿರ್ವಹಣಾಧಿಕಾರಿ ಗವಿರಂಗಪ್ಪ ಮಾತನಾಡಿ, ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗಿಕರಣ ಗೊಳಿಸುವುದರಿಂದ ಇಲಾಖೆಯ ನೌಕರರ ಜೀವನಕ್ಕೆ ಮಾರಕವಾಗುತ್ತದೆ ಹಾಗೂ ರೈತರು, ಸಾರ್ವಜನಿಕರಿಗೆ ಈ ಕಾಯ್ದೆಯು ಹೊರೆಯಾಗಿರುವುದು ಎಂದರು.
ಬೆಸ್ಕಾಂ ಎಎಓ ಧನರಾಜ್ ಮಾತನಾಡಿ, ಕೇಂದ್ರ ಸರ್ಕಾರದ ಈ ನೀತಿಯು ನೌಕರರಿಗೆ ಮಾರಕವಾಗಿರುವುದಲ್ಲದೆ ಇದರಿಂದ ನೌಕರರ ಜೀವನಕ್ಕೆ ಭದ್ರತೆ ಇರುವುದಿಲ್ಲ, ರೈತರಿಗೆ, ಸಾರ್ವಜನಿಕರಿಗೆ ಈ ಕಾಯ್ದೆಯಿಂದ ತೊಂದರಯಾಗುವುದು ಎಂದರು.ಶಾಖಾಧಿಕಾರಿ ಯೋಗೇಂದ್ರ ಮಾತನಾಡಿ, ಕಾರ್ಮಿಕ ವಿರೋಧಿ ನೀತಿಯು ಪ್ರತಿಯೊಬ್ಬ ನೌಕರರಿಗೂ, ಸಾಮಾನ್ಯ ರೈತರಿಗೆ, ಸಾರ್ವಜನಿಕರಿಗೆ ಮಾರಕವಲ್ಲದೆ, ಈ ನೀತಿಯಿಂದ ಬಂಡವಾಳ ಶಾಹಿಗಳ ದಬ್ಬಾಳಿಕೆ ಹೆಚ್ಚಾಗುವುದು ಇದರಿಂದ ನೌಕರರ ಜೀವನ ಕಷ್ಟಕರವಾಗುವುದು ಎಂದರು.ಈ ಸಂದರ್ಭದಲ್ಲಿ ಬೆಸ್ಕಾಂ ಸಿಬ್ಬಂದಿಗಳಾದ ಇರ್ಫಾನ್, ಆನಂದ್, ಪ್ರಶಾಂತ್, ಗಿರೀಶ್ ಹಾಗೂ ನೌಕರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
