ತುಮಕೂರು
ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷ ಣಿಕ ಹೀಗೆ ನಾನಾ ವಲಯಗಳಲ್ಲಿ ಸಕ್ರೀಯವಾಗಿ ಗುರ್ತಿಸಿಕೊಂಡಿದ್ದ ಭೂಮಿ ಬಳಗದ ಅಧ್ಯಕ್ಷ ಜಿ.ಎಸ್.ಸೋಮಶೇಖರ್ (ಸೋಮಣ್ಣ ಗುರುವಾರ ರಾತ್ರಿ10.15ಕ್ಕೆ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಅನಾ ರೋಗ್ಯ ನಿಮಿತ್ತ ಖಾಸಗಿ ಆಸ್ಪತ್ರೆಗೆ ದಾಖ ಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಜಿಎಸ್. ಸೋಮಣ್ಣ ಅವರು ಸಿದ್ದಗಂಗಾ ಕಾಲೇಜಿನ ಗ್ರೇಡ್-1 ದೈಹಿಕ ಶಿಕ್ಷಣ ಅಧೀಕ್ಷರಾಗಿ ಕಾರ್ಯನಿರ್ವಹಿಸಿ ಆ ಸಂಸ್ಥೆಯಲ್ಲಿ ಹೆಚ್ಚು ಚಿರಪರಿಚಿತರಾಗಿದ್ದರು. ಮಠದೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರು. ಉತ್ತಮ ಕ್ರೀಡಾಪಟು ವಾಗಿ ಅನೇಕರಿಗೆ ಸ್ಫೂರ್ತಿ ನೀಡಿದ್ದಾರೆ. ನಿವೃತ್ತಿ ನಂತರ ಸಾಹಿತ್ಯಾತಕ, ಸಂಘಟನಾತ್ಮಕ ಚಟುವಟಿಕೆಗಳಿಗೆ ಹೆಚ್ಚು ಒತ್ತುಕೊಟ್ಟು ಭೂಮಿ ಬಳಗದ ಮೂಲಕ ಸಾಕಷ್ಟು ರಚನಾ
ತಕ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದರು. ಕಲರ್
ಗ್ರೂಪ್ ಅಧ್ಯಕ್ಷರಾಗಿ ಚಿತ್ರಕಲಾ ಚಟುವಟಿಕೆಗಳಿಗೆ
ಸ್ಫೂರ್ತಿ ನೀಡಿದ್ದಾರೆ.
ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ 109ನೇ ಹುಟ್ಟು ಹಬ್ಬಕ್ಕೆ 109 ಕಲಾವಿದುಂದ ಕುಂಚ ತೋರಣ ಎಂಬ ವಿಶೇಷ ಕಾರ್ಯಕ್ರಮವನ್ನು ಸಂಘಟಿಸಿದ್ದರು. ತುಮಕೂರಿಗೆ, ಶ್ರೀಮಠಕ್ಕೆ ಅನೇಕರನ್ನುಜಿ.ಎಸ್.ಸೋಮಣ್ಣಪರಿಚಯಿ ಸಿದ್ದಾರೆ. ಸಾಕಷ್ಟು ಪುಸ್ತಕ ಪ್ರಕಟಣೆಗೆ ಸಹಕಾರ ನೀಡಿದ್ದಾರೆ.ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಅವರ ಪ್ರಗತಿಯ ಬೆರಗು ಅಭಿನಂದನಾ ಗ್ರಂಥ ಸಂಪಾದಕರಾಗಿದ್ದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತಕೆ.ಶಿವರಾಮ ಕಾರಂತ ಅವರ ಕೃತಿ ಮೂಕಜ್ಜಿಯ ಕನಸುಗಳುಕಾದಂಬರಿಯನ್ನು ಪಿ.ಶೇಷಾದ್ರಿ ನಿರ್ದೇಶನದಲ್ಲಿ ಸಿನಿಮಾ ನಿರ್ಮಿಸಿದ್ದರು. ಇದಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಇದೇ ರೀತಿ ಬರಗೂರು ರಾಮಚಂದ್ರಪ್ಪ ಅವರ ಜೊತೆಗೂಡಿ ಚಿತ್ರ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಮುನ್ನುಡಿ, ಬೇರು ಚಿತ್ರಗಳ ನಿರ್ಮಾಕರಾಗಿದ್ದರು. ಹೆಬ್ಬೆಟ್ಟು ರಾಮಕ್ಕ ಚಿತ್ರ ನಿರ್ಮಾಣದಲ್ಲಿಯೂ ಇವರ ಸಹಕಾರದಿತ್ತು. ಬರಗೂರು ರಾಮಚಂದ್ರಪ್ಪ ಪ್ರೊ.ಎಸ್.ಜಿ. ಸಿದ್ದರಾಮಯ್ ಮೊದಲಾದವರ ನಿಕಟ ಸಂಪರ್ಕ ಹೊಂದಿ ಹಲವು ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಸಿದ್ದಗಂಗಾ ಮಠದ ಜೊತೆ ನಿಕಟ ಸಂಪರ್ಕ ಹೊಂದಿದಂತೆ ಯೇ ಚಿತ್ರದುರ್ಗದ ಮುರುಘಾಮಠ,ಸುತ್ತೂರು ಮಠದ ಜೊತೆಯೂ ಸಂಪರ್ಕ ಹೊಂದಿದ್ದರು. ತುಮಕೂರಿನಲ್ಲಿರುವ ಜಯದೇವ ಮುರುಘರಾಜೇಂದ್ರ ವಿದ್ಯಾರ್ಥಿ ನಿಲಯದ ಹಾಗೂ ಶಾಲೆಯಕಾರ್ಯದರ್ಶಿಯಾಗಿದ್ದರು.ರಾಜಕೀಯ ಕ್ಷೇತ್ರದಲ್ಲಿಯೂ ತೊಡಗಿಕೊಂಡಿದ್ದ ಸೋಮಣ್ಣ ಅವರು ಜೆಡಿಎಸ್ನಿಂದ ತುಮಕೂರು ವಿಧಾನ ಸಭಾ ಕ್ಷೇತ್ರಕ್ಕೆ 2004ರಲ್ಲಿ ಸ್ಪರ್ಧಿಸಿದ್ದರು. ನಂತರದ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಪಕ್ಷದಲ್ಲಿ ಪದಾಧಿಕಾರಿಯೂ ಆಗಿದ್ದರು. ಸಾಹಿತಿ ಮತ್ತು ಕಲಾವಿದರೊಂದಿಗೆ ಆತ್ಮೀಯ ನಂಟು ಹೊಂದಿದ್ದ ಸೋಮಣ್ಣ ಅವರು ಅನೇಕರಿಗೆ ಕಷ್ಟಕಾಲದಲ್ಲಿ ಸಹಾಯ ಹಸ್ತ ನೀಡಿದ್ದರು.
ಸಂತಾಪ:
ಹಿರಿಯ ಸ್ನೇಹಿತರಾಗಿದ್ದ ಜಿ.ಎಸ್.ಸೋಮಣ್ಣ ನಿಧನರಾಗಿರುವುದು ನಮ್ಮೆಲ್ಲರಿಗೂ ತುಮಕೂರು ನಗರಕ್ಕೆ ತುಂಬಲಾರದ ನಷ್ಟ ಎಂದು ಪ್ರಜಾ ಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ. ನಗರದ ಅನೇಕ ಸಂಘ ಸಂಸ್ಥೆಗಳ ಬೆನ್ನೆಲುಬಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಸಕ್ರಿಯವಾಗಿ ಗುರ್ತಿಸಿಕೊಂಡಿದ್ದರು. ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಬಗ್ಗೆ ವಿಶೇಷ ಗೌರವ
ಹೊಂದಿದ್ದರು. ಇಂತಹ ಆತ್ಮೀಯ ಒಡನಾಡಿ ಇಲ್ಲವಾಗಿರುವುದು ಅತ್ಯಂತ ನೋವುಂಟು ಮಾಡಿದೆ ಎಂದಿದ್ದಾರೆ.
ಸೋಮಣ್ಣ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಡಾ. ಲಕ್ಷ್ಮಣದಾಸ್ ಅವರು ಜಾತ್ಯತೀತ ಮನಸ್ಸಿನ ಆತ್ಮೀಯ ಒಡನಾಡಿ ಇಲ್ಲ ಎಂದು ಹೇಳುವುದು ಮನಸ್ಸಿಗೆ ತುಂಬಾ ನೋವುಂಟುಮಾಡಿದೆ.ಕಲಾವಿದರಿಗೆ ಹೆಚ್ಚು ಸ್ಪಂದಿಸುತ್ತಿದ್ದ ವ್ಯಕ್ತಿಯಾಗಿದ್ದರುಎಂದು ಸ್ಮರಿಸಿದ್ದಾರೆ.
