ಜಮೀನು ವಿವಾದ : ಯಾದಲಗಟ್ಟೆಯಲ್ಲಿ ಅಣ್ಣನಿಂದಲೇ ತಮ್ಮನಿಗೆ ಚಾಕು ಇರಿತ

ಚಳ್ಳಕೆರೆ

      ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಸಹೋದರರಿಬ್ಬರ ನಡುವೆ ಜಗಳ ನಡೆದು ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ತಾಲ್ಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ನಡೆದಿದೆ. ತಳಕು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆಸಿದ್ದು, ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ ಹಾಗೂ ಹಲ್ಲೆಗೊಳಗಾದ ಆತನ ಹೆಂಡತಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

      ಯಾದಲಗಟ್ಟೆಯ ಮಂಜಣ್ಣ(45) ಎಂಬ ವ್ಯಕ್ತಿ ಚಾಕು ಇರಿತಕ್ಕೆ ಒಳಗಾಗಿದ್ದು, ಈ ಸಂದರ್ಭದಲ್ಲಿ ಈತನ ಹೆಂಡತಿ ಲಕ್ಷ್ಮೀದೇವಿಯ ಮೇಲೂ ಸಹ ಹಲ್ಲೆ ನಡೆಸಲಾಗಿದ್ದು, ಅಘಾತಕ್ಕೆ ಒಳಗಾದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

        ಈ ಬಗ್ಗೆ ಮಾಹಿತಿ ನೀಡಿದ ಗಾಯಾಳು ಮಂಜಣ್ಣ, ನನ್ನ ತಂದೆ ಚಿಕ್ಕಣ್ಣ, ನನ್ನ ದೊಡ್ಡಪ್ಪ ಗಿಡ್ಡಪ್ಪ ಇಬ್ಬರು ಮೃತಪಟ್ಟಿದ್ದು ಈ ಹಿಂದೆ ನನ್ನ ತಂದೆ ಗ್ರಾಮದಲ್ಲಿ ಎರಡೂವರೆ ಎಕರೆ ಜಮೀನು ಖರೀದಿಸಿ ನನ್ನ ದೊಡ್ಡಪ್ಪ ಹೆಸರಿಗೆ ಖಾತೆ ಮಾಡಲಾಗಿದೆ. ನಮ್ಮ ದೊಡ್ಡಪ್ಪ ನಿಧನರಾದ ನಂತರ ಸದರಿ ಜಮೀನು ನನಗೂ ಮತ್ತು ನನ್ನ ದೊಡ್ಡಪ್ಪನ ಮಗ ಬಸವರಾಜುಗೂ ಹಂಚಿಕೆಯಾಗಬೇಕಿತ್ತು. ಒಂದು ಮನೆ ಸಹ ಇದ್ದು ಇದೂ ಸಹ ಹಂಚಿಕೆಯಾಗಬೇಕಿತ್ತು. ಆದರೆ, ನನ್ನ ಸಹೋದರ ಬಸವರಾಜು ನನಗೆ ಜಮೀನು ನೀಡಲು ಒಪ್ಪದೆ ತಕರಾರರು ಮಾಡುತ್ತಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ನನಗೆ ಚಾಕುವಿನ ಇರಿದಿದ್ದಲ್ಲದೆ. ನನ್ನ ಪತ್ನಿಗೂ ಸಹ ಹಲ್ಲೆ ನಡೆಸಿದ್ದಾನೆಂದು ಆರೋಪಿಸಿದ್ದಾನೆ. ತಳಕು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap