ದ್ವಿ ಚಕ್ರ ಸವಾರನಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಸವಾರನ ಬಲಗಾಲು ಮುರಿತ

ಮಿಡಿಗೇಶಿ

           ಮಧುಗಿರಿಯಿಂದ ಪಾವಗಡಕ್ಕೆ ಹಾದು ಹೋಗುವ ಕೆ.ಶಿಫ್.ರಾಜ್ಯ ಹೆದ್ದಾರಿ ರಸ್ತೆ ಬಿದರಕೆರೆ ಗ್ರಾಮದ ಬಸ್‍ನಿಲ್ದಾಣದ ಬಳಿ ಬಿದರಕೆರೆ ಗ್ರಾಮದ ಗಂಗರಾಜು (19) ಎನ್ನುವ ಯುವಕ ತನ್ನ ನೂತನ ದ್ವಿಚಕ್ರವಾಹನ ಮೇಲೆ ಕುಳಿತಿದ್ದು ಇಂದು ಬೆಳ್ಳಿಗ್ಗೆ 8-10 ರ ಸಮಯದಲ್ಲಿ ಹಾಸನ ಜಿಲ್ಲೆಯಿಂದ ಮಹಾರಾಷ್ಟ್ರ ರಾಜ್ಯಕ್ಕೆ ಶುಂಠಿಯನ್ನು ಹೊತ್ತುಯ್ಯುತ್ತಿದ್ದ ಲಾರಿ ಕೆಎಲ್-12ಇ-9630(ಚಾಲಕ ರಷೀದ್) ಬಿದರಕೆರೆ ಗ್ರಾಮದ ಬಳಿ ನಿಂತಿದ್ದ ದ್ವಿಚಕ್ರವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಗರಾಜುವಿನ ಬಲಗಾಲು ಮುರಿದಿರುತ್ತದೆ.ಸದರಿ ಗಾಯಾಳು ನನ್ನ ಕೆ.ಶಿಫ್.ನ ಅಂಬುಲೆನ್ಸ್ ಮೂಲಕ ಮಧುಗಿರಿ ತಾಲ್ಲೂಕು ಆಸ್ಪತ್ರಗೆ ಸಾಗಿಸಲು ಮಿಡಿಗೇಶಿ ರಕ್ಷಣಾ ಸಿಬ್ಬಂದಿ ಸಂಜೀವರಾಜು ಹಾಗೂ ಇತರರು ಸಹಾಯ ಮಾಡಿರುತ್ತಾರೆ,ಅಪಘಾತಕ್ಕಿಡಾದ ದ್ವಿಚಕ್ರ ವಾಹನ ಹಾಗೂ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಮುಂದುವರಿಸಿರುತ್ತಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap