ಟ್ರ್ಯಾಕ್ಟರ್ ಹಿಂದಿಕ್ಕಲು ಹೋಗಿ ಬೈಕ್ ಸವಾರ ಸಾವು

ಪಾವಗಡ

     ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್ ಹಿಂದಿಕ್ಕಲು ಹೋಗಿ ಟ್ರ್ಯಾಲಿಗೆ ತಲೆ ತಗುಲಿ ಸಾವನ್ನಪ್ಪಿದ ಘಟನೆ ತಿರುಮಣಿ ಸಮೀಪದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

      ತಾಲ್ಲೂಕಿನ ಗರಿಮೇಕಲಪಲ್ಲಿ ಗ್ರಾಮದ ಧನಂಜಯ (31) ತಿರುಮಣಿಯಿಂದ ತಮ್ಮ ಗ್ರಾಮಕ್ಕೆ ಹೋಗುವ ವೇಳೆ ಟ್ರ್ಯಾಕ್ಟರ್ ಹಿಂದಿಕ್ಕಲು ಪ್ರಯತ್ನಿಸಿ ಟ್ರ್ಯಾಕ್ಟರ್ ಟ್ರ್ಯಾಲಿಗೆ ತಲೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ತಿರುಮಣಿ ಪೋಲೀಸರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಆ್ಯಂಬ್ಯುಲೆನ್ಸ್‍ನಲ್ಲಿ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿರುತ್ತಾನೆ. ಘಟನೆಯ ಸಂಬಂಧ ತಿರುಮಣಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

Recent Articles

spot_img

Related Stories

Share via
Copy link
Powered by Social Snap