ಹರಪನಹಳ್ಳಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮ ದಿನವನ್ನು ಭಾನುವಾರ ತಾಲ್ಲೂಕು ಜಾತ್ಯತೀತ ಜನತಾದಳದ ಮುಖಂಡರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಎನ್.ಕೊಟ್ರೇಶ್, ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದ್ದೇನೆ. ಅವರೂ ಕೂಡ ಉತ್ತಮ ಸ್ಪಂದನೆ ನೀಡಿದ್ದಾರೆ. ಯಾವುದೇ ಹುದ್ದೆ ನೀಡಿದರೂ ಪಕ್ಷ ಬಲವರ್ದನೆಗೆ ಶ್ರಮಿಸುತ್ತೇನೆ ಎಂದರು.
2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಕರೆಯಲ್ಪಡಿದ್ದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ರಾಜ್ಯದಲ್ಲಿ ಸಮಿಶ್ರ ಸರ್ಕಾರ ಸುಭದ್ರವಾಗಿ ಜನಪರವಾದ ಆಡಳಿತ ನಡೆಸುತ್ತಿದೆ. ಸಾಲಮನ್ನಾದ ಋಣಪತ್ರ ನೀಡುವುದನ್ನು ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ರೈತರಿಗೂ ಸಾಲಮನ್ನಾ ಯೋಜನೆಯ ಲಾಬ ಸಿಗಲಿದೆ ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜನತಾಗೌಡ್ರ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ರೆಡ್ಡಿ, ಮುಖಂಡರಾದ ಪಾಟೀಲ್ ಬೆಟ್ಟನಗೌಡ್ರ, ಶಿರಹಟ್ಟಿ ದಂಡೆಪ್ಪ, ಮೈದೂರು ರಾಮಣ್ಣ, ವೀರೇಶಗೌಡ, ಎ.ಮೂಸಾಸಾಬ್, ಕೆ.ಆನಂದಪ್ಪ, ಶಿಕಾರಿ ಬಾಲಪ್ಪ, ಗುಂಡಗತ್ತಿ ಕೊಟ್ರಪ್ಪ, ನಂದಿಬೇವೂರು ಪರಮೇಶಪ್ಪ, ಹಲವಾಗಲು ಬಸವರಾಜ, ಅರಸೀಕೆರೆ ಸುರೇಶ್, ಹೊಂಬಳಗಟ್ಟಿ ಪೀರಾಸಾಬ್, ಸಿರಾಜ್, ಮಕ್ಬೂಲ್, ಎಚ್.ವೀರೇಶ್ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
