ಬೆಂಗಳೂರು
ಟ್ವಿಟ್ಟರ್ ನಲ್ಲಿ ನಾಲಿಗೆ ಹರಿಬಿಟ್ಟ ಬಿಜೆಪಿ
Q: Who are you?
A: I am @Ram_Guha ( Ramachandra Guha).#UrbanNaxals who operate in a Dark World are completely unknown to the Common Man.They make their presence felt through inciting violence & organizing protests at the behest of their Masters.
They are getting exposed now. pic.twitter.com/AgnVVTkJHT
— BJP Karnataka (@BJP4Karnataka) December 20, 2019
ಇತಿಹಾಸ ತಜ್ಞ ಹಾಗೂ ಅಂಕಣಕಾರ ರಾಮಚಂದ್ರ ಗುಹಾ ಅವರನ್ನು ‘ನಗರ ನಕ್ಸಲೀಯ’ ಎಂದು ರಾಜ್ಯ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆರೋಪಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ರಾಮಚಂದ್ರ ಗುಹಾ ನಗರ ನಕ್ಸಲೀಯರಾಗಿದ್ದು, ಕಾರ್ಗತ್ತಲ ಜಗತ್ತಿನಲ್ಲಿ ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿರುವುದು ಜನಸಾಮಾನ್ಯರಿಗೆ ಇದು ಅರ್ಥವಾಗುವುದಿಲ್ಲ ಎಂದು ಟ್ವೀಟ್ನಲ್ಲಿ ಆರೋಪಿಸಿ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದೆ.ನಕ್ಸಲ್ ವಾದದ ಗುರುಗಳ ಪರವಾಗಿ ಇಂತಹ ನಾಯಕರು ದೇಶದಲ್ಲಿ ಪ್ರತಿಭಟನೆ ಹಾಗೂ ಹಿಂಸಾಚಾರಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ಅವರ ಬಣ್ಣ ಈಗ ಬಯಲಾಗಿದೆ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಟೌನ್ಹಾಲ್ ಸಮೀಪ ನಡೆದ ಪ್ರತಿಭಟನೆಯಲ್ಲಿ ರಾಮಚಂದ್ರ ಗುಹಾ ಮತ್ತು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದರು ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪ್ರತಿಭಟನೆಗೆ ಮುಂದಾದ ಅವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಲಾಗಿತ್ತು. ಈ ಕೃತ್ಯವನ್ನು ಖಂಡಿಸಿದ್ದ ಗುಹಾ, ಇದು ಪ್ರಜಾತಂತ್ರ ವಿರೋಧಿ ಕ್ರಮವಾಗಿದೆ. ಶಾಂತಿಯುತವಾಗಿ ಜನರು ಪ್ರತಿಭಟನೆಗೂ ಅವಕಾಶ ನೀಡದಿರುವುದು ಸರಿಯಲ್ಲ ಎಂದು ಆರೋಪಿಸಿದರು.