ಭದ್ರಕೋಟೆಗಳನ್ನು ಭೇದಿಸಲಿದೆ ಬಿಜೆಪಿ : ವಿ ಸೋಮಣ್ಣ

ತುಮಕೂರು

   ಯಾವ ಕ್ಷೇತ್ರದಲ್ಲಿ ಯಾವ ಭದ್ರಕೋಟೆಯೂ ಲೆಕ್ಕಕ್ಕಿಲ್ಲ, ಅಭಿವೃದ್ಧಿಯೊಂದನ್ನೇ ಜನ ಅಪೇಕ್ಷಿಸುತ್ತಾರೆ. ಹಿಂದೆ ಎಲ್ಲಾ ಕ್ಷೇತ್ರಗಳೂ ಕಾಂಗ್ರೆಸ್‍ನ ಭದ್ರ ಕೋಟೆಗಳಾಗಿದ್ದವು, ದಿಢೀರ್ ಬದಲಾವಣೆಗಳಾಗಿ ಆ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಪಡೆಯುತ್ತಿದೆ, ಹಾಗೇ ಶಿರಾ ಕ್ಷೇತ್ರದಲ್ಲೂ ಈ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

   ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿರಾಗೆ ಹೊರಟಿದ್ದ ಸಚಿವ ಸೋಮಣ್ಣ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಮಠದ ಅಧ್ಯಕ್ಷರಾದ ಸಿದ್ಧಲಿಂಗಸ್ವಾಮೀಜಿಗಳ ದರ್ಶನ ಮಾಡಿ, ಆಶೀರ್ವಾದ ಪಡೆದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಬಿಜೆಪಿಯಲ್ಲಿ ಯಡಿಯೂರಪ್ಪನವರು ಪ್ರಶ್ನಾತೀತ ನಾಯಕರು, ಅವರು ಮುಖ್ಯಮಂತ್ರಿಯಾಗಿ ಬಾಕಿ ಇರುವ ಎರಡೂಮುಕ್ಕಾಲು ವರ್ಷ ಪೂರೈಸುತ್ತಾರೆ ಎಂದ ಅವರು, ಸದÀ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಯಡಿಯೂರಪ್ಪನವರು ಎಲ್ಲಿಯವರೆಗೆ ಆ ಹುದ್ದೆಯಲ್ಲಿರಬೇಕು ಎಂಬ ಸಂದೇಶವಿದೆ, ಅಷ್ಟೂ ದಿನ ಅವರು ಮುಂದುವರೆಯುತ್ತಾರೆ ಎಂದರು.

   ಶಿರಾ ಹಾಗೂ ಆರ್.ಆರ್.ನಗರ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಪಡೆಯುತ್ತಾರೆ, ಹಾಗೇ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಚಿದಾನಂದಗೌಡರ ಗೆಲುವು ಖಚಿತ ಎಂದು ಹೇಳಿದರು.ಕೊರೊನಾದ ಸಂಕಷ್ಟವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಅನುಭವ, ಬುದ್ಧಿವಂತಿಕೆಯಿಂದ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ಅಗತ್ಯ ನೆರವು ನೀಡಲು ಸರ್ಕಾರ ಬದ್ದವಾಗಿದೆ, ಮುಖ್ಯಮಂತ್ರಿಗಳು ಇಂದು ವೈಮಾನಿಕ ಸಮೀಕ್ಷೆ ನಡೆಸಿ, ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಸಚಿವ ಸೋಮಣ್ಣ ಹೇಳಿದರು.

   ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಆಗ್ನೇಯ ಪದವೀಧರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಸೇರಿದಂತೆ ವಿವಿಧ ಬಿಜೆಪಿ ಮುಯಖಂಡರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link