ತಿಪಟೂರು : ಕುಡಿಯುವ ನೀರಿಗೆ ಕನ್ನಾ ಹಾಕಿದ ಬಿ ಎಂ ಆರ್ ಕಂಪನಿ

ತಿಪಟೂರು :

       ನಗರಕ್ಕೆ ನೀರೊದಗಿಸುವ ಈಚನೂರು ಕೆರೆಯ ನೀರನ್ನು ಅಕ್ರಮವಾಗಿ ರಸ್ತೆಕಾಮಗಾರಿಗೆ ಬಳಸುತ್ತಿದ್ದಾರೆ ಇದು ತಕ್ಷಣವೇ ನಿಲ್ಲಬೇಕು ಮತ್ತು ನೀರನ್ನು ಅಕ್ರಮವಾಗಿ ಬಳಸಿಕೊಲ್ಳುತ್ತಿರುವ ಬಿ.ಎಂ.ಆರ್ ಕಂಪಿನಯ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕೆಂದು ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಾಂತರಾಜು ಆಗ್ರಹಿಸಿದ್ದಾರೆ.

     ತಾಲೂಕಿನ ಈಚನೂರು ಕೆರೆಯಿಂದ ತಿಪಟೂರು ನಗರಕ್ಕೆ ಕಳೆದ 20 ವರ್ಷಗಳಿಂದ ಕುಡಿಯುವ ನೀರೊದಗಿಸುವ ಏಕೈಕ ಮೂಲವಾಗಿದೆ. ಆದರೆ ಬಿ.ಎಂ.ಆರ್ ಕಂಪನಿಯು ಇದರ ಮೇಲೆ ಕಣ್ಣು ಹಾಕಿದ್ದು ತನ್ನ ರಸ್ತೆಕಾಮಗಾರಿಗೆ ಬೇಕಾದ ನೀರನ್ನು ಈಚನೂರು ಕೆರೆಯಿಂದ ನೀರನ್ನು ಪೈಪ್ ಮೂಲಕ ಟ್ಯಾಂಕರ್ ಲಾರಿಗಳಿಗೆ ತುಂಬಿಸಿಕೊಂಡು ಹೋಗುತ್ತಿದ್ದಾರೆ.

     ಈ ಕುಡಿಯುವ ನೀರನ್ನು ಯಾವುದೇ ಕಾರಣಕ್ಕೂ ಕೃಷಿ ಕೆಲಸಕ್ಕಾಗಿ ಹೊಲಗದ್ದೆಗಳಿಗೆ ನೀರನ್ನು ಬಳಸದೇ ಕುಡಿಯುವ ನೀರಿಗೋಸ್ಕರವೇ ಇರುವ ನೀರನ್ನು ರಸ್ತೆ ರಸ್ತೆ ಕಾಮಗಾರಿಗೆ ಬಳಸಿಕೊಂಡರೆ ನಗರದ ಜನತೆಯು ಕುಡಿಯುವ ನೀರಲ್ಲದೇ ಪರಿತಪಿಸುವಂತಾಗುತ್ತದೆ ಆದ್ದರಿಂದ ಕೂಡಲೇ ನೀರನ್ನು ಬಳಸಿದವರಿಗೆ ಸೂಕ್ತ ಕ್ರಮಜರುಗಿಸಿ ಮುಂದೆ ನೀರನ್ನು ತೆಗೆದುಕೊಂಡು ಹೋಗಲು ಬರುವವರೆಇಗೆ ಚುರುಕುಮುಟ್ಟಿಸುವ ಪ್ರಯತ್ನವಾಗಬೇಕೆಂದು ಎಚ್ಚರಿಸಿದ ಕಾಂತರಾಜು ನೀರು ಇದೇ ರೀತಿ ದುರ್ಬಳಕೆಯಾದರೆ ದುರ್ಬಳಕೆಯಾದರೆ ಹೋರಾಟ ಅನಿವಾರ್ಯವೆಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link