ಮಂಗಳೂರು
ಇಂದು ಬಜ್ಪೆಯಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಸಜೀವ ಬಾಂಬ್ ಅನ್ನು ಯಶಸ್ವಿಯಾಗಿ ಸ್ಪೋಟಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳದವಯಸ್ಥಳಕ್ಕೆ ಧಾವಿಸಿದ್ದಾರೆ.ಪ್ರಯಾಣಿಕರು ಇದರಿಂದಾಗಿ ಆತಂಕಗೊಂಡಿದ್ದರು. ಪೊಲೀಸರು ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಿದ್ದಾರೆ.
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರಯಾಣಿಕರಿಗೆ ಮೀಸಲಾದ ಜಾಗದಲ್ಲಿದ್ದ ಬ್ಯಾಗ್ನಲ್ಲಿ ಬಾಂಬ್ ಪತ್ತೆಯಾಗಿದೆ. ಲ್ಯಾಪ್ ಟಾಪ್ ಬ್ಯಾಗ್ನಲ್ಲಿ ಸಜೀವ ಬಾಂಗ್ ಇದ್ದು, ಬಾಂಬ್ ನಿಷ್ಕ್ರಿಯದಳ ಬ್ಯಾಗ್ ವಶಕ್ಕೆ ಪಡೆದುಕೊಂಡು ಕಾರ್ಯಾಚರಣೆ ನಡೆಸಿ ಜನರ ಮಾನ ಪ್ರಾಣ ಕಾಪಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/01/xmangaloreairport-1579502665.jpg.pagespeed.gif)