ಮಧುಗಿರಿ
ಪಾವಗಡಕ್ಕೆ ಹೋಗುವ ಕೆ.ಶಿ.ಪ್ ರಾಜ್ಯಹೆದ್ದಾರಿ ಲೋಕೋಪಯೋಗಿ ರಸ್ತೆ ಮಿಡಿಗೇಶಿ ಬಳಿ ಮಾರುತಿನಗರ ಸಮೀಪದ ಮೋರಿಗೆ ಮಧುಗಿರಿ ಕಡೆಯಿಂದ ಪಾವಗಡಕ್ಕೆ ಪ್ರಯಾಣಿಸುತ್ತಿದ್ದ ಸ್ಯಾಂಟ್ರೋಕಾರು ಕೆ ಎ 05 ಪಿ 8221ರ ವಾಹನ ಬೆಂಗಳೂರಿನಿಂದ ಪಾವಗಡ ತಾಲ್ಲೂಕಿನ ಬ್ಯಾಡನೂರು ಗ್ರಾಮಕ್ಕೆ ತಾ 24-11-2018 ರ ರಾತ್ರಿ 2.30 ರಲ್ಲಿ ಪ್ರಯಾಣ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿಹೊಡೆದ ಪರಿಣಾಮದಿಂದ ಕಾರು ಜಖಂಗೊಂಡಿದ್ದು ಕಾರಿನಲ್ಲಿದ್ದ ಮಂಜುಳಮ್ಮಳಿಗೆ ಸೊಂಟಕ್ಕೆ ಬಲವಾದ ಪೆಟ್ಟುಬಿದ್ದಿದೆ.
ಸಿದ್ದಲಿಂಗಪ್ಪ, ನಾಗರಾಜು,ಶಿವಕುಮಾರ್ ಹಾಗೂ ಚಾಲಕ ದಯಾನಂದನಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ಸದರಿ ಅಪಘಾತಕ್ಕೀಡಾದ ಗಾಯಾಳುಗಳನ್ನು ಮಿಡಿಗೇಶಿ ಎ.ಎಸ್.ಐ ರವಿ ಹಾಗೂ ರಕ್ಷಣಾ ಸಿಬ್ಬಂದಿಯವರು ಕೆ.ಶಿ.ಪ್ ನ ಅಂಬುಲೆನ್ಸ್ ನಲ್ಲಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಮಿಡಿಗೇಶಿ ಠಾಣೆಯಲ್ಲಿ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
