ಅದಿರು ಲಾರಿಗಳ ಸಂಚಾರ : ಜನರಿಗೆ ಸಮಸ್ಯೆಯಾಗದಂತೆ ಕ್ರಮ;ಡಿಸಿ

ಭೀಮಸಮುದ್ರ :

    ಭಿಮಸಮುದ್ರ ಸಮೀಪದ ಬೊಮ್ಮೆನಹಳ್ಳಿ ಜಾನ್ ಮೈನ್ಸ್ ನ ಅದಿರು ತುಂಬಿದ ಲಾರಿಗಳು ಸಂಚರಿಸುವುದರಿಂದ ಬೊಮ್ಮೇನಹಳ್ಳಿ ಕಡ್ಲೆಗುದ್ದು ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಭರವಸೆ ನೀಡಿದರು

    ಬೊಮ್ಮೇನಹಳ್ಳಿ ಗ್ರಾಮದಿಂದ ಕಡ್ಲೆಗುದ್ದು ಗ್ರಾಮದ ಮೂಲಕ ಒಡಾಡುವ ಸಾರ್ವಜನಿಕರ ಬಸ್ಸು ಹಾಗೂ ಶಾಲಾ ವಾಹನಗಳಿಗೆ ಹತ್ತಿರದಲ್ಲಿರುವ ಶಾಲೆಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. 60 ರಿಂದ 70 ಲಾರಿಗಳು ಈ ಮಾರ್ಗವಾಗಿ 3ವರ್ಷಗಳಿಂದ ಸಂಚರಿಸುತ್ತವೆ. ದಿನನಿತ್ಯ ವಾಹನಗಳ ಕಿರಿಕಿರಿಯಾಗುತ್ತಿದ್ದು ಹಲವು ಭಾರಿ ಜಿಲ್ಲಾಧಿಕಾರಿಗಳಿಗೆ ಬೊಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಮೂಲಕ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ ಆದ್ದರಿಂದ ಇಂದು ಬೊಮ್ಮೇನಹಳ್ಳಿ ಗ್ರಾಮಸ್ಥರು ಲಾರಿಗಳನ್ನು ತಡೆ ಹಿಡಿದು ಜಿಲ್ಲಾಧೀಕಾರಿ ಬರುವವರೆಗು ಲಾರಿ ಸಂಚರಿಸಲು ಅನುಮತಿ ನೀಡುವುದಿಲ್ಲವೆಂದು ಪಟ್ಟುಹಿಡಿದಿದ್ದರು ಆದ ಕಾರಣ ತಕ್ಷಣ ಜಿಲ್ಲಾಧಿಕಾರಿಗಳಾದ ವಿನೋತ್ ಪ್ರಿಯಾ ಎಸ್.ಪಿ ಅರುಣ್ ಕುಮಾರ್ ಸ್ಥಳಕ್ಕೆ ಆಗಮಿಸಿ ಲಾರಿಗಳು ಸಂಚರಿಸುವ ಮಾರ್ಗ ಪರಿಶೀಲನೆ ಮಾಡಿದರು ತಕ್ಷಣ ಸಾರ್ವಜನಿಕರಿಗೆ ಸಮಸ್ಯೆ ಬಗೆಹರಿಸುತ್ತೇನೆ ಅಲ್ಲಿಯವರೆಗೆ ಲಾರಿ ಸಂಚರಿಸಲಿ ಎಂದು ಸೂಚನೆ ನೀಡಿದ್ದಾರೆ.

     ತಾಲ್ಲೂಕ್ ಪಂಚಾಯಿತಿ ಸದಸ್ಯರಾದ ಸುರೇಶ್ ನಾಯ್ಕ, ಬೊಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್ ಹಾಗೂ ಅರುಣ್ ಕುಮಾರ್. ಗಾಯಿತ್ರಿ ಸಿದ್ದೇಶ್ವರ್ ಭೀಮಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣ್ ಕುಮಾರ್,ಬೊಮ್ಮೇನಹಳ್ಳಿ ಗ್ರಾಮದ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು, ಮಹಿಳೆಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link