ತುರುವೇಕೆರೆ
ವಿದ್ಯುತ್ ತಂತಿ ಹರಿದ ಬಿದ್ದ ಪರಿಣಾಮ ಮನೆಯ ಮುಂದೆ ಕಟ್ಟಿದ್ದ ಗಬ್ಬದ ಹಸು ಹಾಗೂ ಎಮ್ಮೆ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.ಕೋಡಿಹಳ್ಳಿ ಗ್ರಾಮದ ರೈತ ಕೆಂಚಪ್ಪ ಎನ್ನುವರು ಎಂದಿನಂತೆ ತನ್ನ ಮನೆಯ ಮುಂದೆ ಹಸು ಹಾಗೂ ಎಮ್ಮೆಯನ್ನು ಕಟ್ಟಿದ್ದಾರೆ. ಬುಧವಾರ ಸಂಜೆ ಸುಮಾರು 5 ಗಂಟೆ ಸಮಯದಲ್ಲಿ ವಿದ್ಯುತ್ ತಂತಿ ಹಸು ಹಾಗೂ ಎಮ್ಮೆ ಮೇಲೆ ಹರಿದು ಬಿದ್ದಿದ್ದು ವಿದ್ಯುತ್ ಶಾಕ್ ತಗಲಿದ ಕೂಡಲೇ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾವೆ. ಕುಟುಂಬ ನಿರ್ವಹಣೆಗಾಗಿ ಸಾಕಿಕೊಂಡಿದ್ದ ಎಮ್ಮೆ ಹಸು ಸಾವಿನಿಂದ ರೈತ ಕೆಂಚಪ್ಪರಿಗೆ ಅಪಾರ ನಷ್ಟ ಸಂಭವಿಸಿದೆ.
ಬೆಸ್ಕಾಂ ನಿರ್ಲಕ್ಷ್ಯ: ಗ್ರಾಮದಲ್ಲಿ ಸುಮಾರು 40 ವರ್ಷದ ಹಳೆಯದಾದ ವಿದ್ಯುತ್ ಕಂಬ ಹಾಗೂ ತಂತಿಗಳಿದ್ದು ಇವುಗಳನ್ನು ಬದಲಾವಣೆಗಳನ್ನು ಮಾಡದೆ ಬೆಸ್ಕಾಂ ಇಲಾಖೆ ನಿರ್ಲಕ್ಷವಹಿಸಿದ್ದರ ಪರಿಣಾಮ ಎಮ್ಮೆ, ಹಸು ಸಾವನ್ನಪ್ಪಿದ್ದಾವೆ. ಬೆಸ್ಕಾಂ ಇಲಾಖೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಹಾಗೂ ವಿದ್ಯುತ್ ತಂತಿ ಬದಲಾಯಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/23tvk04-animal-death.gif)