ಹಿರಿಯೂರು :
ಏಪ್ರಿಲ್ ಒಂದರಂದು ಜನರನ್ನು ಮೂರ್ಖರನ್ನಾಗಿಸಿ ಏಪ್ರಿಲ್ ಪೂಲ್ ಆಚರಿಸಿ ಸಂಭ್ರಮಿಸುವ ಬದಲು, ಏರುತ್ತಿರುವ ತಾಪಮಾನವನ್ನು ಕಡಿಮೆ ಮಾಡಲು ಎಲ್ಲರೂ ಒಂದೊಂದು ಗಿಡ ನೆಡುವ ಮೂಲಕ ಏಪ್ರಿಲ್ ಕೂಲ್ ಆಚರಿಸಬೇಕು ಎಂಬುದಾಗಿ ಅಖಿಲ ಭಾರತೀಯ ಕಿಸಾನ್ಸಂಘದ ಗೌರವಾಧ್ಯಕ್ಷ ಕಸವನಹಳ್ಳಿ ರಮೇಶ್ ಮನವಿ ಮಾಡಿದರು.
ತಾಲ್ಲೂಕಿನ ಕಸವನಹಳ್ಳಿಯ ಗ್ರಂಥಾಲಯದ ಮುಂಭಾಗ ಜಾಗತಿಕ ತಾಪಮಾನ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಏಪ್ರಿಲ್ ಪೂಲ್ ಬದಲಿಗೆ ಎರಡು ಸಸಿ ನೆಡುವ ಮೂಲಕ ಏಪ್ರಿಲ್ ಕೂಲ್ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಣ್ಮರೆಯಾಗುತ್ತಿರುವ ಅರಣ್ಯದಿಂದ ಕಡಿಮೆ ಆಗುತ್ತಿರುವ ಮಳೆಯಿಂದ ಮತ್ತಷ್ಟು ಹಸಿರು ಮಾಯವಾಗುತ್ತಿದ್ದು, ಅರಣ್ಯ ಸಂರಕ್ಷಣೆ ನಮ್ಮ ಆದ್ಯತೆ ಆಗಬೇಕು. ಸ್ಥಳಾವಕಾಶ ಇರುವಲ್ಲೆಲ್ಲ ಸಸಿ ನೆಟ್ಟು ಪೋಷಿಸಿದರೆ ಕೆಲವೇ ವರ್ಷಗಳಲ್ಲಿ ಮತ್ತೆ ಪ್ರಕೃತಿಯಲ್ಲಿ ಹಸಿರು ಕಾಣಬಹುದು. ಹಸಿರು ಮಾಯವಾದರೆ ನಮ್ಮ ಉಸಿರು ಹೋದಂತೆ ಎಂಬ ಎಚ್ಚರಿಕೆ ಎಲ್ಲರಲ್ಲೂ ಇರಬೇಕು ಎಂಬುದಾಗಿ ಅವರು ಸೂಚಿಸಿದರು.ಈ ಕಾರ್ಯಕ್ರಮದಲ್ಲಿ ರಾಮಚಂದ್ರ, ಯೋಗೇಶ್, ಸತೀಶ್, ಕೆಂಚರಾಯ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
