ಸವಾಲು ಸ್ವಿಕರಿಸಿದ ಸಿದ್ದು

ಬೆಂಗಳೂರು

       ಬಳ್ಳಾರಿ ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಗಣಿ ಉದ್ಯಮಿ ಹಾಗೂ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರು ಒಡ್ಡಿರುವ ಬಹಿರಂಗ ಚರ್ಚೆ ಸವಾಲನ್ನು ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ.

       ರೆಡ್ಡಿ ಆಹ್ವಾನ ಕುರಿತು ಬಳ್ಳಾರಿಯಲ್ಲಿ ಪ್ರತಿಕ್ರಯಿಸಿದ ಸಿದ್ದರಾಮಯ್ಯ, ನೀನಂತೂ ಬಳ್ಳಾರಿ, ಬೆಂಗಳೂರಿಗೆ ಬರುವ ಆಗಿಲ್ಲ. ಅದೆಲ್ಲಿ ಕರಿತಿಯೋ ಕರಿ ಅಲ್ಲಿಯೇ ಬಂದು ಬಹಿರಂಗ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

       ನಾನು ಅಕ್ರಮ ಗಣಿಗಾರಿಕೆ ಮಾಡಿಲ್ಲ. ನನ್ನ ಅಧಿಕಾರಾವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಿವೆ. ಈ ಕುರಿತು ಅಂಕಿ ಅಂಶ ಸಹಿತ ಚರ್ಚೆಗೆ ನಾನು ಸಿದ್ದ ಎಂದರು.

        ಜನಾರ್ಧನ ರೆಡ್ಡಿ ಅವರು ಅಕ್ರಮ ಗಣಿಗಾರಿಕೆ ಮಾಡಿಲ್ಲ ಎಂದರೆ ಕೋಟಿ, ಕೋಟಿ ಹಣ ಎಲ್ಲಿಂದ ಬಂತು. ಮನೆಯಲ್ಲಿ ಚಿನ್ನದ ಚೇರು, ಚಿನ್ನದ ಕಮೋಡು ಹೇಗೆ ಬಂತು. ಇವು ನಿಮ್ಮ ಪೂರ್ವರ್ಜಿತ ಆಸ್ತಿಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

        ಗಣಿಗಾರಿಕೆಯಲ್ಲಿ ಕೋಟ್ಯಾಂತರ ಹಣ ಲೂಟಿ ಮಾಡಿದ್ದೀರಾ ಎಂದು ರಾಜ್ಯದ ಜನರಲ್ಲಾ ಹೇಳುತ್ತಾರೆ. ಮಾಡಿದ ತಪ್ಪಿಗೆ ನಾಲ್ಕು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದೀರಾ. ಇಷ್ಟಾದರೂ ನಿಮಗೆ ನಾಚಿಕೆ ಆಗೋಲ್ಲವೆ ಎಂದು ಕುಟುಕಿದರು.

       ರಾಜ್ಯದ ಎಲ್ಲಾ ಕಡೆ ಬಿಜೆಪಿ ವಿರುದ್ಧದ ಗಾಳಿ ಬೀಸುತ್ತಿದೆ. ಐದು ಉಪಚುನಾವಣೆಯಲ್ಲಿ ನಾವು ಗೆಲ್ಲಲ್ಲಿದ್ದೇವೆ. ಎರಡು ಪಕ್ಷದ ನಾಯಕರು ಒಮ್ಮತದಿಂದ ಉಗ್ರಪ್ಪ ಅವರನ್ನು ಕಣಕ್ಕೆ ಇಳಿಸಿದ್ದು, ಅವರು ಗೆಲ್ಲಲಿದ್ದಾರೆ. ಲೋಕಸಭೆಯಲ್ಲಿ ಸಮರ್ಥವಾಗಿ ಮಾತನಾಡುವ ವ್ಯಕ್ತಿಯನ್ನು ಜನರು ಆರಿಸಬೇಕು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap