ಚಂಗಾವಿ ಪಂಚಾಯ್ತಿಯ ಹಳ್ಳಿಗಳಿಗೆ ಬಸ್ ಸೌಲಭ್ಯ

ತುರುವೇಕೆರೆ

        ಸರಿಯಾದ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದ ಚಂಗಾವಿ ಪಂಚಾಯ್ತಿ ಹಳ್ಳಿಗಳ ಜನರ ಹಲವು ದಿನಗಳ ಕನಸು ಇಂದು ನನಸಾಗಿದೆ ಎಂದು ಬಿಜೆಪಿ ಮುಖಂಡ ನಾಗರಾಜು ತಿಳಿಸಿದರು.

       ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿ.ಎಸ್.ಪುರ ಹೋಬಳಿಯ ರಾಚೇನಹಳ್ಳಿ ಗ್ರಾಮದಲ್ಲಿ ಪ್ರಥಮ ಬಾರಿಗೆ ಆಗಮಿಸಿದ ಸಾರಿಗೆ ಬಸ್‍ಗೆ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿ.ಎಸ್.ಪುರ ಹೋಬಳಿಯ ಅನೇಕ ಹಳ್ಳಿಗಳಿಗೆ ಸಾರಿಗೆ ಬಸ್ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಜನರು ಪಟ್ಟಣಗಳಿಗೆ ತೆರಳಲು ಬಹಳ ತೊಂದರೆಯಾಗಿತ್ತು. ಸಾರಿಗೆ ಬಸ್ ನೂತನ ಮಾರ್ಗದಿಂದ ವಿದ್ಯಾರ್ಥಿಗಳು ಸೇರಿ ಎಲ್ಲ ವರ್ಗದ ಜನರಿಗೂ ಅನುಕೂಲವಾಗಿದೆ. ನೂತನ ಸಾರಿಗೆ ಬಸ್ ಮಾರ್ಗ ಕಲ್ಪಿಸಿದ ಶಾಸಕ ಮಸಾಲ ಜಯರಾಮ್‍ರವರಿಗೆ ಹಾಗೂ ಶ್ರಮಿಸಿದ ಬಿಜೆಪಿ ಯುವ ಮುಖಂಡ ರಾಚೇನಹಳ್ಳಿ ಶಿವಲಿಂಗೇಗೌಡಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

       ಬಿಜೆಪಿ ಯುವ ಮುಖಂಡ ರಾಚೇನಹಳ್ಳಿ ಶಿವಲಿಂಗೇಗೌಡ ಮಾತನಾಡಿ ಅನೇಕ ವರ್ಷಗಳಿಂದ ಈ ಭಾಗದಲ್ಲಿ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಜನರು ಸಮಸ್ಯೆಯನ್ನು ಶಾಸಕ ಮಸಾಲಜಯರಾಮ್‍ಗೆ ಮನವಿ ಮಾಡಲಾಗಿತ್ತು. ಶಾಸಕರು ಕೂಡಲೇ ಸಾರಿಗೆ ಅಧಿಕಾರಿಗಳ ಜೊತೆ ಮಾತನಾಡಿ ಸಾರಿಗೆ ಬಸ್ ಮಾರ್ಗ ಕಲ್ಪಿಸಿಕೊಟ್ಟರು. ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

        ನೂತನ ಸಾರಿಗೆ ಬಸ್ ತುಮಕೂರಿನಿಂದ ಹೊರಟು ಗೂಳೂರು, ನಾಗವಲ್ಲಿ, ಸಿರಿವಾರಹ್ಯಾಂಡ್‍ಪೋಸ್ಟ್, ಕೊಡಿಗೆಹಳ್ಳಿಪಾಳ್ಯ, ಕಾಳೇನಹಳ್ಳಿ, ದೊಡ್ಡಚಂಗಾವಿ, ಅವ್ವೇರಹಳ್ಳಿ, ರಾಚೇನಹಳ್ಳಿ, ಹೊಸಹಳ್ಳಿ, ಮಾವಿನಹಳ್ಳಿ, ಬೋರಪ್ಪನಹಳ್ಳಿ ಮೂಲಕ ಇಡಗೂರಿನಲ್ಲಿ ನಿಂತು ಮತ್ತೆ ಇದೇ ಮಾರ್ಗದಲ್ಲಿ ತುಮಕೂರಿಗೆ ತೆರಳಲಿದೆ.

         ಕಾರ್ಯಕ್ರಮದಲ್ಲಿ ಸಿ.ಎಸ್.ಪುರ ಪೊಲೀಸ್ ಠಾಣೆಯ ಪೇದೆ ಹನುಮಂತಯ್ಯ, ಮುಖಂಡರಾದ ಪಾಪು, ಸೈಫುದ್ದಿನ್, ಸತೀಶ್, ಸಣ್ಣಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link