ದಾವಣಗೆರೆ:
ರಾವಲ್ ಸಿನಿ ಫೋಕಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚರಂತಿ ಚಿತ್ರ ಡಿ.6ರಂದು ರಾಜ್ಯ 70 ಚಿತ್ರ ಮಂದಿರದಲ್ಲಿ ತೆರೆ ಕಾಣಲಿದೆ ಎಂದು ನಿರ್ಮಾಪಕ, ನಾಯಕ ನಟ ಡಾ.ಪರಶುರಾಮ್ ರಾವಲ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.70 ರಷ್ಟು ಉತ್ತರ ಕರ್ನಾಟಕದಲ್ಲಿಯೇ ಚಿತ್ರೀಕರಣಗೊಂಡಿರುವ ಚರಂತಿ ಚಿತ್ರವೂ, ಉತ್ತರ ಕರ್ನಾಟಕದ ಭಾಷಾ ಸೋಗಡಿನಿಂದ ಕೂಡಿದ್ದು, ಪ್ರೇಮಮಯ ಸಾಮಾಜಿಕ ಕಳಕಳಿಯಿಂದ ಕೂಡಿದೆ ಎಂದರು.
ಚರಂತಿ ಸಂಸ್ಕøತ ಪದವಾಗಿದ್ದು, ಇದು ಪಯಣ, ಜರ್ನಿ ಎಂಬ ಅರ್ಥ ನೀಡಲಿದೆ. ಯುವಕ-ಯುವತಿ ಪ್ರೀತಿ ಮಾಡಿದ ಮೇಲೆ ಏನೆಲ್ಲಾ ಸಮಸ್ಯೆಗಳು ತರೆದುಕೊಂಡು ಅನಾಹುತ ಸಂಭವಿಸಲಿದೆ ಎಂಬ ಕಥಾ ಹಂದರವನ್ನು ಚಿತ್ರ ಹೊಂದಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೇಲರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಇದು ತಮ್ಮ ನಿರ್ದೇಶನದಲ್ಲಿ ಮೂಡಿ ಬಂದಿರುವ ಪ್ರಪ್ರಥಮ ಚಿತ್ರವಾಗಿದ್ದು, ನಾಯಕ ನಟರಾಗಿ ನಾನು, ನಾಯಕಿಯಾಗಿ ಮಧು ಟಿಳೇಕರ್, ಸದಾನಂದ್ ಕಾಳೆ, ರಾಜಪ್ಪ ದಳವಾಯಿ, ರಂಗಸ್ವಾಮಿ, ಜಗದೀಶ್ ಜಾಲ, ವಿಜಯಕುಮಾರ್ ಜಿತೋರಿ, ಎಂ.ಎನ್.ಸುರೇಶ್ ಮತ್ತಿತರರು ಅಭಿನಯಿಸಿದ್ದಾರೆ. ಅವಿನಾಶ್ ಬಾಸುತ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಿವಾಜಿ ನಿಂಗೋಜಿರಾವ್ ಛಾಯಾಗ್ರಹಣ, ಮನ್ವರ್ಷಿ ನವಲಗುಂದ ಸಾಹಿತ್ಯ, ವೆಂಕಿ ಸಂಕಲನ ಮಾಡಿದ್ದಾರೆ. ಉತ್ತರ ಕನ್ನಡ ಶೈಲಿಯ ಭಾಷೆಯಲ್ಲಿ ಸಂಭಾಷಣೆಯಲ್ಲಿರುವ ಚಿತ್ರವನ್ನು ಎಲ್ಲರೂ ವೀಕ್ಷಿಸಿ, ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ನಾಯಕಿ ನಟಿ ಮಧು ಟಿಳೇಕರ್ ಮಾತನಾಡಿ, ನಾನು ಮರಾಠಿ, ಹಿಂದಿ ಭಾಷೆಗಳ ಧಾರವಾಹಿ ಹಾಗೂ ಚಿತ್ರಗಳಲ್ಲಿ ಅಭಿನಯಿಸಿದ್ದು, ಕನ್ನಡ ಚಿತ್ರರಂಗದಲ್ಲಿ ಇದು ನನ್ನ ಪ್ರಥಮ ಚಿತ್ರವಾಗಿದೆ. ಪ್ರೇಕ್ಷಕರು ಚಿತ್ರವನ್ನು ಬೆಂಬಲಿಸಬೇಕೆಂದು ಕೋರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
