ಚಿತ್ರದುರ್ಗ

ಜಿಲ್ಲೆಯ ಹಿರಿಯೂರು ತಾಲ್ಲೂಕು ,ಹರ್ತಿಕೋಟೆ ಗ್ರಾಮದ ಬಸ್ ನಿಲ್ದಾಣದಿಂದ ನಿತ್ಯ ವಿದ್ಯಾರ್ಥಿಗಳು, ನೌಕರರು, ಕೂಲಿ ಕಾರ್ಮಿಕರು ಸೇರಿದಂತೆ ನೂರಾರು ಜನರು ಓಡಾಡುತ್ತಾರೆ ಆದರೆ ಇಲ್ಲಿ ಒಂದು ಸರಿಯಾದ ತಂಗುದಾಣ ಇಲ್ಲದೆ ಬಿಸಿಲಿನಲ್ಲಿ ಬಸ್ ಕಾಯುವುದು ಅನಿವಾರ್ಯ ಆಗಿತ್ತು.
ಇದನ್ನು ಗಮನಿಸಿದ ಬಡಗಿ ತಿಪ್ಪೇಸ್ವಾಮಿ ಹಾಗೂ ಹೋಟೆಲ್ ಸುರೇಶ್ ಇವರು ಹರ್ತಿಕೋಟೆ ಮತ್ತು ಮಜುರೆ ಗ್ರಾಮಸ್ಥರ ಸಹಾಯ ಮತ್ತು ಸಹಕಾರದೊಂದಿಗೆ ಬೇಸಿಗೆ ಪ್ರಯುಕ್ತ ನೆರಳು ಮತ್ತು ಕುಡಿಯಲು ನೀರಿನ ವ್ಯವಸ್ಥೆ ಮಾಡದ್ದು ಈ ಕೆಲಸ ಅನೇಕರಿಗೆ ಮಾದರಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
