ಸಿಹಿ ಹಂಚಿ ಕಾಂಗ್ರೇಸ್ ಕಾರ್ಯಕರ್ತರ ವಿಜಯೋತ್ಸವ

ಹರಪನಹಳ್ಳಿ:

        ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿದ ಹಿನ್ನೆಲೆಯಲ್ಲಿ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಐಬಿ ವೃತ್ತದಲ್ಲಿ ಬುಧವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. 

          ದೇಶದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ ಕಾಂಗ್ರೆಸ್ ಅತ್ಯಧಿಕ ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ದೇಶದ ಜನತೆ ಮತ್ತೆ ಕಾಂಗ್ರೆಸ್ ಪರ ಒಲವು ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಪಕ್ಷದ ಪರ ಘೋಷಣೆ ಕೂಗಿದರು.

          ಹಿರಿಯ ಮುಖಂಡ ಟಿ.ಎಚ್.ಎಂ. ವಿರುಪಾಕ್ಷಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ವಿ. ಅಂಜಿನಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಪರಶುರಾಮಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಮುಖಂಡರಾದ ಕೆ.ಎಂ.ಬಸವರಾಜಯ್ಯ, ವೆಂಕಟೇಶ ವಕೀಲರು, ಡಿ.ರೆಹಮಾನಸಾಬ್ ಮಾತನಾಡಿದರು.

         ಈ ಸಂದರ್ಭದಲ್ಲಿ ಎಚ್. ವಸಂತಪ್ಪ, ಅಲ್ಮರಸಿಕೆರೆ ಪರಶುರಾಮ, ತೆಲಿಗಿ ಉಮಾಕಾಂತ, ಲಾಟಿ ದಾದಾಪೀರ್, ಇರ್ಫಾನ್ ಮುದಗಲ್ಲ, ನೀಲಗುಂದ ವಾಗೀಶ್ ಪ್ರೇಮಕುಮಾರ, ಶಿವಕುಮಾರನಾಯ್ಕ, ಮಂಜ್ಯಾನಾಯ್ಕ, ಪೀರ್ ಅಹ್ಮದ್, ಓ.ಮಹಾಂತೇಶ್, ಶ್ರೀಕಾಂತ, ಶಮಿವುಲ್ಲಾ, ಅಶೋಕ, ರಜಾಕ್ ಸಾಬ್ ಇತರರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap