ಚಿತ್ರದುರ್ಗ 

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾಂಗ್ರೆಸ್ ಪಕ್ಷದ ನಾಯಕರೆ ನೇರ ಹೊಣೆ ಎಂದು ನ್ಯಾಯವಾದಿ ಶಿವುಯಾದವ್ ದೂರಿದ್ದಾರೆ.
ಈ ಬಗ್ಗೆ ಹೇಳೀಕೆಯನ್ನು ನೀಡಿರುವ ಅವರು ರಾಜಕೀಯ ಅರಾಜಕತೆ ಅಧಿಕಾರದ ಆಸೆ, ಸಂಘಟನೆಯ ಕೊರತೆಯಿಂದ ಜಿಲ್ಲೆ ಮತ್ತು ರಾಜ್ಯದಲ್ಲಿ ಕೊಟ್ಯಂತರ ಕಾರ್ಯಕರ್ತರು ತಲೆತಗ್ಗಿಸುವಂತಾಗಿದೆ. ಕಾಂಗ್ರೆಸ್ ಪಕ್ಷವನ್ನು ಮೂರಾಬಟ್ಟೇ ಮಾಡಿದ್ದಿರಾ ಇನ್ನಾದರೂ ಪಕ್ಷಕ್ಕಾಗಿ ದುಡಿಯುತ್ತಿರುವ ತಳಮಟ್ಟದ ಕಾರ್ಯಕರ್ತರು ಹಾಗೂ ಯುವ ಸಮೂಹವನ್ನು ಬೆಳೆಸಬೇಕಾಗಿದೆ. ಹಿರಿಯರ ಸಲಹೆ ಪಾಲಿಸಿ ರಾಜಕೀಯ, ಜಾತಿ, ಹಣದ, ಕಿಳರುಮೆ ಬಿಟ್ಟು ಒಬ್ಬ ಸಮಾನ್ಯ ಕಾರ್ಯಕರ್ತನನ್ನು ಗೌವರವಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ವಿರೋಧ ಪಕ್ಷದೊಂದಿಗೆ ಅಪವಿತ್ರ ಮೈತ್ರಿಯಂತಹ ದ್ರೊಹದ ರಾಜಕೀಯ ನಿಮ್ಮಗಳ ಸ್ವಾರ್ಥದ ಆಸೆಗಾಗಿ ಅಧಿಕಾರದ ದೂರಲೊಚನೆಗಾಗಿ ನಮ್ಮನ್ನು ಬಲಿಪಶುಗಾಳನಾಗಿ ಮಾಡಬೇಡಿ ಯಾಕಂದ್ರೆ ನೀವುಗಳು ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಿರಿ ಚುನಾವಣೆಯಲ್ಲಿ ಮತ್ತು ಮುಗಿದ ನಂತರ ಆದರೆ ನಮ್ಮಂತಹ ಕಾರ್ಯಕರ್ತರು ಪಕ್ಷಕ್ಕಾಗಿ ನಮ್ಮಗಳ ಪ್ರಾಣಬಿಟ್ಟೆವು ಸ್ವಾಭಿಮಾನ ಮತ್ತು ಪಕ್ಷ ಸಿದ್ದಾಂತ ಬದ್ದತೆ ಬಿಡಲಾರೆವು.ಇಂದಿನ ಸೋಲು ಮುಂದಿನ ಪಾಠವನ್ನಾದರು ಕಲಿಸಿರುವುದೆಂದು ಅಗತ್ಯವೆಂದು ಪಕ್ಷದ ನಾಯಕರುಗಳಲ್ಲಿ ಮನವಿ ಮಾಡಿದ್ದಾರೆ.
ಸರಳ ಸಜ್ಜನಿಕೆ ಸೌಮ್ಯ ಸ್ವಾಭಾವರಾದ ಬಹುತೇಕ ಜನಸಾಮಾನ್ಯರ ಪ್ರೀತಿ ಪಾತ್ರರಾದ ಬಿ.ಎನ್ ಚಂದ್ರಪ್ಪರನ್ನು ಗೆಲ್ಲಿಸಿಕೊಳ್ಳುವಲ್ಲಿ ನಾವು ಸಂಪೂರ್ಣ ವಿಫರಾಗಿದ್ದೇವೆ ನಮ್ಮ ಜನನಾಯಕರು ತೆಗೆದುಕೊಂಡು ತಪ್ಪು ನಿರ್ಧಾರ ಮತ್ತು ಕೆಟ್ಟ ನಡೆವಳಿಕೆಗೆ ಮತ್ತು ಅವರವರ ಅದಿಕಾರದ ವೈಯಕ್ತಿಕ ದುರಾಸೆಗೆ ಬಲಿಯಾಗಿದ್ದೇವೆ
ಕಾಂಗ್ರೆಸ್ ಪಕ್ಷದ ಅಭ್ಯುದಯಕ್ಕಾಗಿ ರಾಷ್ಟ್ರ ಮಟ್ಟದಿಂದ ಗ್ರಾಮ ಮಟ್ಟದವರೆಗೆ ಎಲ್ಲಾ ಪದಾಧಿಕಾರಿಗಳನ್ನು ಬದಲಾವಣೆ ಮಾಡವ ಅನಿವಾರ್ಯತೆ ಎದುರಾಗಿದೆಪಕ್ಷದ ಬಗ್ಗೆ ಕಾಳಜಿ, ಬದ್ದತೆ, ಸಂಘಟನೆ ಮಾಡುವ ಹಾಗೂ ಪ್ರಾಮಾಣಿಕವಾಗಿ ಪಕ್ಷವನ್ನು ಮುನ್ನೆಡುಸುವಂತಹ ವ್ಯಕ್ತಿಗಳನ್ನು ನೇಮಕ ಮಾಡಬೇಕಾಗಿದೆ ಇಲ್ಲದೇ ಹೊದರೆ ಮುಂದಿನ ಪರಿಸ್ಥಿತಿ ಇದಕ್ಕಿಂತಲೂ ಅಯೋಮಯವಾಗಿತ್ತದೆ ಎಂದು ಎಚ್ಚರಿಸಿದ್ದಾರೆ.
ನಮಗೆ ಈ ಲೋಕಸಭಾ ಚುನಾವಣಾ ಫಲಿತಾಂಶವು ಎಚ್ಚರಿಕೆಯ ಗಂಟೆ ಯಾಗ ಬೇಕು ಈ ಕ್ಷಣದಿಂದ ನಾವು ಮಾಡಿ ಕೊಳ್ಳಬೇಕಾಗಿರುವುದು ಈ ಸೋಲು ನಮ್ಮ ಸ್ವಾಭಿಮನಕ್ಕೆ ದಕ್ಕೆ ತಂದ ಸೋಲು. ಹಾಗೂ ಈ ಸೋಲು ನಮಗೆ ಪಾಠವಾಗಬೇಕು ಅದನ್ನು ಮೆಟ್ಟಿ ನಿಲ್ಲಬೇಕು.
ನಾವು ಯಾರಿಗೂ ಈ ಸೋಲಿನ ಹೊರೆ ನೀಡದೆ ಸ್ವತಹಃ ಪ್ರತಿಯೊಬ್ಬರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಪಕ್ಷಕ್ಕಾಗಿ ನಾವು ಏನೂ ಮಾಡಿದ್ದೇವೆ, ನಾನು ಪ್ರಕ್ಷಕ್ಕಾಗಿ ಏನೂ ಕೊಡುಗೆ ನೀಡಿದ್ದೇನೆ ಪಕ್ಷಕ್ಕಾಗಿ ದಿನದಲ್ಲಿ ಎಷ್ಟು ಸಮಯ ಮೀಸಲಿಟ್ಟಿದ್ದೇನೆ ಎನ್ನುವ ಬಗ್ಗೆ ನಮ್ಮಷ್ಟಕ್ಕೆ ನಾವೇ ಆತ್ಮಾವಲೋಕನ ಮತ್ತು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗಾಗೆ ನಮ್ಮ ಜವಾಬ್ದಾರಿ ಏನಾಗಿರಬೇಕು ಎಂದು ತಿಳಿಯೋಣ ಪಕ್ಷವನ್ನು ಬೇರು ಮಟ್ಟದಿಂದ ಪಕ್ಷ ಕಟ್ಟಲು ಸಿದ್ದರಾಗೋಣ.
ಪ್ರತಿಯೊಬ್ಬರು ಪಕ್ಷ ಮುಂದಿನ ಬಾರಿ ನಾವು ಗೆಲ್ಲೆಲೇ ಬೇಕು ಅನ್ನುವ ಸಂಕಲ್ಪದಿಂದ ಕೆಲಸ ಮಾಡುವಂತವರಾಗೋಣ. ಸೋಲಿನಿಂದ ಕುಗ್ಗುವುದು ಬೇಡ…. ನಾವು ಸತ್ಯ ಪರವಾಗಿ ಕೆಲಸ ಮಾಡಿದ್ದೇವೆ, ಯಾರೂ ನಿರಾಶೆ ಆಗುವುದು ಬೇಡ ಸೋಲೆ ಗೆಲುವಿನ ಮೆಟ್ಟಿಲು…ಈ ಹಿಂದೆ ನಮ್ಮ ಪಕ್ಷ ಹಲವಾರು ಚುನಾವಣೆ ಗೆದ್ದಿದ್ದೆ…..ನ್ಯಾಯದ ಪರ ಹೋರಾಟ ಮಾಡೋಣ ಮತ್ತೆ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟೋಣ
ಬಿಜೆಪಿ ಯಿಂದ ಈ ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಸಾದ್ಯವಿಲ್ಲ ಇದನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ನಮ್ಮಿಂದ ಪ್ರಾಮಾಣಿಕವಾಗಿ ಮಾಡಬೇಕಾಗಿದೆ ಆಗಬೇಕಾಗಿದೆ ಮೋದಿಯವರ ಅಸಮರ್ಪಕ ಮತ್ತು ಅಸಮರ್ಥ ಹಾಗೂ ಅವೈಜ್ಞಾನಿಕ ತೀರ್ಮಾನಗಳನ್ನು ಜನಸಾಮಾನ್ಯರತ್ತಾ ಕೊಂಡೊಯ್ಯಲು ಬದ್ದರಾಗೋಣ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
