ತಿಪಟೂರು ಗಣೇಶನಿಗೆ ಕೊರೊನಾ ಬಿಸಿ

ತಿಪಟೂರು :

    ರಾಜ್ಯದ ಹಲವಾರು ಉತ್ಸವಗಳು ಒಂದು ತೂಕವಾದರೆ ತಿಪಟೂರಿನ ಗಣೇಶನ ಉತ್ಸವಕ್ಕೆ ತನ್ನದೇ ಆದ ತೂಕವನ್ನು ಹೊಂದಿದ್ದ ಶ್ರೀ ಸತ್ಯಗಣಪತಿಯ 91ನೇ ವರ್ಷದ ವಿಸರ್ಜನಾಮಹೋತ್ಸವ ಇಂದು ಅತ್ಯಂತ ಸರಳವಾಗಿ ಜರುಗಿತು.ವಿಶ್ವದಾದ್ಯಂತ ಇರುವ ಕಲ್ಪತರು ನಾಡಿನ ಮನೆಮಕ್ಕಳು, ಗೆಳೆಯರು, ಹಿತೈಷಿಗಳು ಈ ಗಣೇಶನ ಉತ್ವವನ್ನು ಕಾಯ್ದು ಕುಳಿತಿದ್ದು ಯಾವಾಗ ಗಣೇಶನ ವಿಸರ್ಜನೆ ಎಂದು ಕಾಯುತ್ತಾ ಕುಳಿತಿರುತ್ತಾರೆ. ಇವರೆಲ್ಲರನ್ನು ಪ್ರತಿವರ್ಷ ಆಗಮಿಸಿ ಗಣೇಶನ ಆಶೀರ್ವಾದವನ್ನು ಪಡೆಯುತ್ತಿದ್ದು ಆದರೆ ಈ ಬಾರಿ ವಿಜೃಂಭಣೆಯ ಗಣೇಶ ವಿಸರ್ಜನೆಗೆ ಕರೋನಾ ಅಡ್ಡಿಯಾಗಿದ್ದು ಭಕ್ತಾದಿಗಳಿಗೆ ಹೆಚ್ಚಿನದಾಗಿ ಯುವಜನತೆಗೆ ನಿರಾಸೆಯನ್ನುಂಟು ಮಾಡಿದ್ದು ಲಕ್ಷಾಂತರ ಜನರುಭಾಗವಹಿಸುತ್ತಿದ್ದ ಈ ವಿಸರ್ಜನಾ ಮಹೋತ್ಸವಕ್ಕೆ ಈ ಬಾರಿ ಕೇವಲ ನೂರು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

   ಶ್ರೀ ಸತ್ಯಗಣಪತಿ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದ ನೂರು ಜನರಿಗೆ ಸತ್ಯ ಗಣಪತಿಯ ಉತ್ಸವಸಾಗುವ ದಾರಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾಂಕೇತಿಕವಾದ ವಾದ್ಯಗಳನ್ನು ಹೊರತುಪಡಿಸಿ ಕಲಾತಂಡಗಳು, ಡಿ.ಜೆ ಸೌಂಡ್ಸ್ ಗುಂಪು ನೃತ್ಯಗಳಿಗೆ ಅವಕಾಶ ಇರಲಿಲ್ಲ.

ಜಾತ್ರೆಯ ನೆಪದಲ್ಲಿ ಹಲವರ ಹೊಟ್ಟೆಪಾಡು :

   ಹೆಸರಿಗೆ ಗಣೇಶನ ಜಾತ್ರೆಯಾದರೆ ಈ ಜಾತ್ರೆಗೆ ಬರುತ್ತಿದ್ದ ಸಹಸ್ರಾರು ಜನರಿಗೆ ಮನೆಯ ಅಂಕಾರಿಕ ವಸ್ತುಗಳಿಂದ ಹಿಡಿದು ಮಕ್ಕಳ ಆಟಿಕೆಗಳು, ತಹಾವೇರಿ ಆಹಾರ ಪದಾರ್ಥಗಳು, ಕಡಲೆಪುರಿ, ಬತಾಸು, ಖಾರ, ವಿವಿಧ ಮನರಂಜನಾ ಕಾರ್ಯಕ್ರಮಗಳು, ಕಿವಿಯನ್ನು ಹಿಂಡುತ್ತಿದ್ದ ಸಿಡಿಮದ್ದು ಮತ್ತು ಡಿ.ಜೆ.ಯ ಸದ್ದು, ಜಾನಪದ ಕಲಾತಂಡಗಳು ನೃತ್ಯಗಳು, ಅಷ್ಟೇ ಅಲ್ಲದೇ ಹೊರರಾಜ್ಯಗಳಿಮದಲೂ ಮಕ್ಕಳ ಆಟಿಕೆಗಳನ್ನು ಮಾರಲು ಬರುತ್ತಿದ್ದು ಈ ಬಾರಿಯ ಕೊರೊನಾ ದಿಂದ ಇವರೆಲ್ಲರು ಗಣೇಶನ ಉತ್ಸವಕ್ಕೆ ಬಾರದೇ ಬರಲು ಆಸ್ಪದ ನೀಡದ ಕೊರೊನಾ ದಿಂದ ಬದುಕು ದುಸ್ತರವಾಗಿದ್ದು ಇವರೆಲ್ಲರ ಹೊಟ್ಟೆಯ ಮೇಲು ಕೊರೊನಾ ಬರೆ ಎಳೆದಿದೆ.

ಪುರೋಹಿತರಾದ ಪೌರಾಯುಕ್ತ :

     ಪ್ರತಿ ಬಾರಿಯು ಗಣಪತಿ ವಿಸರ್ಜನೆಯ ಸಮಯದಲ್ಲಿ ಪೌರಾಯುಕ್ತರು ನಗರದ ಸ್ವಚ್ಚತೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೆಚ್ಚಾಗಿ ಹೊಂದಿದ್ದು ಗಣಪತಿ ವಿಸರ್ಜನೆಯ 2 ದಿನವು ನಗರಸಭೆಯ ಆಯುಕ್ತರಿಗೆ ಮತ್ತು ಪೌರಕಾರ್ಮಿಕರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತಿತ್ತು. ಆದರೆ ಈ ಬಾರಿ ಮೊದಲನೇ ಗಣಪತಿ ವಿಸರ್ಜನೆಯನ್ನು ಆಚರಿಸುತ್ತಿರುವ ಪೌರಾಯುಕ್ತ ಉಮಾಕಾಂತ್ ನಗರವನ್ನು ಸ್ವಚ್ಚಗೊಳಿಸುವು ಕಾರ್ಯವನ್ನು ಮುಗಿಸಿ ಗಣೇಶನನ್ನು ವಾಹನದ ಮೇಲೆ ಕುಳ್ಳರಿಸಿ ಮೆರವಣಿಗೆಯುದ್ದಕ್ಕೂ ವಾಹನದ ಮೇಲೇರಿ ಪೂಜಾಕಾರ್ಯಮ ನೆರವೇರಿಸಿ ಕೊನೆಯದಾಗಿ ಕಲ್ಯಾಣಿಗೆ ಇಳಿದು ಗಣೇಶನ ವಿಸರ್ಜಿಸಿದ್ದು ವಿಶೇಷವಾಗಿತ್ತು.

    ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಶಾಸಕ ನಾಗೇಶ್, ಮುಖಂಡರಾದ ಶಾಂತ್‍ಕುಮಾರ್, ಸತ್ಯಗಣಪತಿ ಸೇವಾಟ್ರಸ್ಟ್‍ನ ಸದಸ್ಯರುಗಳು, ಹೆಚ್ಚುವರಿ ಎಸ್ಪಿ, ತಿಪಟೂರು ಉಪವಿಭಾಗದ ಡಿ.ವೈ.ಎಸ್ಪಿ, ಸಾಮಾಜಿಕ ಅಂತರವನ್ನು ಕಾಪಾಡಲು ಆರಕ್ಷಕರು ಶ್ರಮಿಸುತ್ತಿದ್ದರು, ಬೆಸ್ಕಾಂ ಸಿಬ್ಬಂದಿ, ನಗರಸಭಾ ಸಿಬ್ಬಂದಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link