ಉಳುಮೆಗೂ ಕೊರೋನಾ ಕಂಟಕ

ಹರಪನಹಳ್ಳಿ

       ತಾಲೂಕಿನ ಕೆರೆಗಳಿಗೆ ನೀರುತುಂಬಿಸುವ ಯೋಜನೆಯಡಿಯಲ್ಲಿ ಆರಂಭವಾದ ಕಾಮಗಾರಿ ಮುಗಿಯದೆ, ಇದೀಗಾ ಕರೋನಾ ಲಾಕ್‍ಡೌನ್‍ನಿಂದ ರೈತರು ತಮ್ಮ ಜಮೀನುಗಳ ಉಳುಮೆ ಮಾಡಿಕೊಳ್ಳಲಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ.
ತಾಲೂಕಿನ ನೀಲಗುಂದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ರೈತರ ಜಮೀನುಗಳಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಭರದಿಂದ ಸಾಗಿದ್ದು. ಪೈಪ್‍ಲೈನ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿರುವಾಗಲೇ ಕರೋನಾ ಕರೀನೆರಳಲ್ಲಿ ಕೂಲಿಕಾರರು ಇಲ್ಲದೆ ಕಾಮಗಾರಿ ಸ್ಥಗಿತಗೊಂಡಿವೆ.

       ಈಗಾಗಲೇ ತಾಲೂಕಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಮುಂಗಾರು ಬಿತ್ತನೆಗೆ ಸಜ್ಜುಗೊಳಿಸಲು ತಮ್ಮ ಜಮೀನುಗಳಲ್ಲಿ ಉಳುಮೆ ಮಾಡಬೇಕೆಂದರೆ, ಗುತ್ತಿಗೇದಾರರು ಪೈಪ್ ಅಳವಡಿಸುವ ಗುಂಡಿ ತೆಗೆದಿದ್ದು ಅಲ್ಲಲ್ಲಿಯೇ ಪೈಪ್‍ಗಳು ಜಮೀನುಗಳಲ್ಲಿ ಹಾಕಿರುವುದು ಅಡ್ಡಿಯಾಗುತ್ತಿವೆ, ಇದರಿಂದ ರೈತರು ಗುಂಡಿ ಮುಚ್ಚಲು ಸಾದ್ಯವಾಗದೆ, ಉಳುಮೆ ಮಾಡಲು ಆಗದೆ ಸಮಸ್ಯೆ ಎದುರಿಸುತ್ತಿದ್ದಾರೆ.

        ತಿಂಗಳೊಳಗಾಗಿ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ರೈತರಿಗೆ ತುಂಬ ನಷ್ಟವಾಗಲಿದ್ದು ಸಂಬಂಧಿಸಿದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಇತ್ತಕಡೆ ಗಮನ ಹರಿಸಬೇಕು ಎನ್ನುತ್ತಾರೆ ಈ ಭಾಗದ ರೈತರಾದ ಬಣಕಾರ ಗಂಗಾಧರಪ್ಪ, ಮದರ ಅಲಿಸಾಬ್, ಎನ್.ಕೊಟ್ರಪ್ಪ, ಕೆ.ಹಾಲೇಶ್, ಕೆ.ವಿರೇಶ್ ಇತರರು.60ಕೆರೆ ನೀರುತುಂಬಿಸುವ ಯೋಜನೆ ಪ್ರಾರಂಭವಾಗಿತ್ತು, ಲಾಕ್‍ಡೌನ್ ಹಿನ್ನಲೆ ಕಾಮಗಾರಿ ನಿಂತಿದ್ದು ಇದರಿಂದ ರೈತರಿಗೆ ಬಿತ್ತನೇ ಕಾರ್ಯಕ್ಕೆ ತೊಂದರೆಯಾಗಲಿದೆ ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು ಇಲ್ಲವೇ ರೈತರಿಗೆ ಪರಿಹಾರ ನೀಡಬೇಕು ಎಂದು ತಾಪಂ ಸದಸ್ಯ ಹೆಚ್.ಚಂದ್ರಪ್ಪ ಒತ್ತಾಯಿಸಿದ್ದಾರೆ.

 

Recent Articles

spot_img

Related Stories

Share via
Copy link