ಬೆಂಗಳೂರು
ಕನಿಷ್ಠ ವೇತನ ಸೂತ್ರದಲ್ಲಿ ವೇತನ ಪರಿಷ್ಕರಣೆ,ಸಾರ್ವಜನಿಕ ವಲಯ ಬ್ಯಾಂಕುಗಳ ವಿಲೀನ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಬ್ಯಾಂಕ್ ಅಧಿಕಾರಿಗಳು ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಬ್ಯಾಂಕ್ಗಳಲ್ಲಿ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದು ಗ್ರಾಹಕರು ಪರದಾಡುವಂತಾಗಿದೆ.
ಮುಷ್ಕರದ ಜೊತೆಗೆ ಸಾಲು ಸಾಲು ರಜೆ ಹಿನ್ನಲೆಯಲ್ಲಿ ಬ್ಯಾಂಕ್ಗಳಲ್ಲಿ ಇನ್ನು ನಾಲ್ಕು ದಿನಗಳ ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳುವುದರಿಂದ ಗ್ರಾಹಕರಿಗೆ ಸಂಕಟದ ಸ್ಥಿತಿ ಎದುರಾಗಿದೆ ನೌಕರರು ಶುಕ್ರವಾರ ಮುಷ್ಕರ ನಡೆಸುತ್ತಿದ್ದರೆ ಡಿ.22 ನಾಲ್ಕನೆ ಶನಿವಾರದ ರಜೆ, ಡಿ. 23ಭಾನುವಾರ, ಡಿ. 25 ಕ್ರಿಸ್ಮಸ್ ಹೀಗೆ ಸಾಲು ರಜೆಗಳಿವೆ. ಡಿ. 24 ಒಂದು ದಿನ ಹೊರತು ಪಡಿಸಿದರೆ 4 ದಿನ ರಜೆ ಇರುವುದರಿಂದ ಬಹುತೇಕ ಬ್ಯಾಂಕಿನ ಕೆಲಸಗಳು ಸಾಧ್ಯವಾಗುವುದಿಲ್ಲ ಎಂದ ತಿಳಿದ ಗ್ರಾಹಕರು ಗುರುವಾರ ಸಂಜೆಯಿಂದಲೇ ಎಟಿಎಂಗಳಿಗೆ ಮೊರೆ ಹೋಗಿದ್ದರು.
ಬ್ಯಾಂಕ್ಗಳಿಗೆ ರಜೆಯಿದ್ದರೂ ಎಟಿಎಂಗಳಲ್ಲಿ ಹಣದ ಕೊರತೆಯಿಲ್ಲದಂತೆ ನೋಡಿಕೊಳ್ಳಲಾಗುವುದು ಅಲ್ಲದೇ ಡಿಜಿಟಲ್ ವ್ಯವಹಾರಗಳಿಗೆ ಯಾವುದೇ ತೊಂದರೆಯಿಲ್ಲದಿರುವುದರಿಂದ ಗ್ರಾಹಕರು ಸ್ವಲ್ಪ ನಿರಾಳರಾಗುವಂತೆ ಮಾಡಿದೆ.ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಷನ್ ನಿಯಮಾವಳಿಗಳ ಪ್ರಕಾರ ಕನಿಷ್ಠ ವೇತನ ಸೂತ್ರವನ್ನು ಆಧರಿಸಿ ವೇತನ ಪರಿಷ್ಕರಣೆ ಮಾಡಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದೆ. ಅಲ್ಲದೆ, ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ ವಿಲೀನದ ಪ್ರಯತ್ನವನ್ನು 1991ರಿಂದ ಸರಕಾರ ತನ್ನ ಉದಾರೀಕರಣ ನೀತಿಯ ಅಡಿಯಲ್ಲಿ ಮಾಡಲು ಮುಂದಾಗಿದೆ.
ಆದರೆ, ಇದನ್ನು ವಿರೋಧಿಸಿ ಕಾರ್ಮಿಕ ಒಕ್ಕೂಟಗಳು ಹಾಗೆ ಹೋರಾಟವನ್ನು ಮಾಡುತ್ತಲೇ ಬರುತ್ತಿವೆ.ಆದರೆ, ಈಗ ಬರೋಡಾ, ಡೇನಾ ಮತ್ತು ವಿಜಯ ಬ್ಯಾಂಕುಗಳನ್ನು ವಿಲೀನ ಮಾಡಬಾರದು ಎನ್ನುವುದು ಕೂಡ ಮುಷ್ಕರದ ಪ್ರಮುಖ ಬೇಡಿಕೆ ಆಗಿದೆ ಎಂದು ಸಂಘದ ಕಾರ್ಯದರ್ಶಿ ಜಿ.ವಿ.ಮಣಿಮಾರುನ್ ತಿಳಿಸಿದ್ದಾರೆ.
ರನ್ನಿಂಗ್ ಸ್ಕೇಲ್ ಆಫ್ ಪೇ ನಂತೆ ಒಬ್ಬ ವ್ಯಕ್ತಿ ವೃತ್ತಿ ಜೀವನ ಸ್ಥಗಿತಗೊಳ್ಳದಂತೆ ಖಚಿತ ಪಡಿಸಿ ಕೊಳ್ಳುವುದು ಅಲ್ಲದೆ, ಅರ್ಹತೆಯ ಮೂಲಕ ಪ್ರಗತಿ ಸಾಧಿಸಲು ಮತ್ತು ಉತ್ತಮ ವೇತನ ಸೌಲಭ್ಯಗಳನ್ನು ಸಿಗುವ ಹಾಗೆ ಮಾಡುವುದು. ಮ್ಯಾಂಡೇಟ್ ಸಮಸ್ಯೆ ಇತ್ಯರ್ಥ ಮಾಡುವುದು ಹಾಗೂ ವೈದ್ಯಕೀಯ ವಿಮೆ ವಿಷಯದಲ್ಲಿ ಅಧಿಕಾರಿಗಳಿಗೆ ಉತ್ತಮ ಆರೋಗ್ಯ ವಿಮಾ ರಕ್ಷಣಾ ಯೋಜನೆಗಳನ್ನು ತರುವ ಉದ್ದೇಶಕ್ಕೆ ವಿರುದ್ಧವಾಗಿ ವಿಮೆ ಕಂಪೆನಿಗಳು ಪ್ರಿಮಿಯಂ ಮೊತ್ತವನ್ನು ಮೂರು ಬಾರಿ ಏರಿಕೆ ಮಾಡಿವೆ. ಇದನ್ನು ಕೂಡಲೇ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








